ಹೆಬ್ಬುಲಿ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭ

ಸುದೀಪ್ ನಟಿಸಲಿರುವ 'ಹೆಬ್ಬುಲಿ' ಕೊನೆಗೂ ಚಿತ್ರೀಕರಣಕ್ಕೆ ಸಜ್ಜಾಗಿದೆ. ನಿಟ್ಟುಸಿರು ಬಿಟ್ಟಿರುವ ನಿರ್ದೇಶಕ ಎಸ್ ಕೃಷ್ಣ, ತಾರಾ ಬಳಗ ಮಾತು ತಾಂತ್ರಿಕ ಬಳಗದ ಆಯ್ಕೆಯಲ್ಲಿ
ನಟ ಸುದೀಪ್
ನಟ ಸುದೀಪ್

ಬೆಂಗಳೂರು: ಸುದೀಪ್ ನಟಿಸಲಿರುವ 'ಹೆಬ್ಬುಲಿ' ಕೊನೆಗೂ ಚಿತ್ರೀಕರಣಕ್ಕೆ ಸಜ್ಜಾಗಿದೆ. ನಿಟ್ಟುಸಿರು ಬಿಟ್ಟಿರುವ ನಿರ್ದೇಶಕ ಎಸ್ ಕೃಷ್ಣ, ತಾರಾ ಬಳಗ ಮಾತು ತಾಂತ್ರಿಕ ಬಳಗದ ಆಯ್ಕೆಯಲ್ಲಿ ನಿರತರಾಗಿದ್ದಾರೆ.

ಫೆಬ್ರವರಿ ಮಧ್ಯದಿಂದ ಚಿತ್ರೀಕರಣ ಪ್ರಾಂಭವಾಗಲಿದ್ದು, ಈಗಾಗಲೇ ಖಳ ನಾಯಕ ರವಿಶಂಕರ್ ನಟಿಸಲು ಒಪ್ಪಿಕೊಂಡಿದ್ದಾರೆ. ತಾಂತ್ರಿಕ ವರ್ಗದಲ್ಲಿ ಅರ್ಜುನ್ ಜನ್ಯ ಸಂಗೀತ ನಿರ್ದೇಶನಕ್ಕೆ ಒಪ್ಪಿಕೊಂಡಿದ್ದರೆ, ಎ ಕರುಣಾಕರ್ ಸಿನೆಮ್ಯಾಟೋಗ್ರಾಫರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಮೊದಲ ಹಂತದ ಚಿತ್ರೀಕರಣ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯಲಿದ್ದು ನಂತರ ಜಮ್ಮು ಕಾಶ್ಮೀರದ ಸೇನಾ ಶಿಬಿರಗಳಲ್ಲಿ ಚಿತ್ರೀಕರಣ ಮುಂದುವರೆಯಲಿದೆಯಂತೆ.

ಸುದೀಪ್ ಅವರು ಮಿಲಿಟರಿ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು ಅದಕ್ಕಾಗಿ ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅವರು ಕೋಟಿಗೊಬ್ಬ-೨ ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಮತ್ತು ಜನವರಿಯಲ್ಲಿ 'ಓ ಮೈ ಗಾಡ್' ಹಿಂದಿ ಸಿನೆಮಾದ ಕನ್ನಡ ಅವತರಿಣಿಕೆಯ ಚಿತ್ರೀಕರಣದಲ್ಲಿ ಕೂಡ ಪಾಲ್ಗೊಳ್ಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com