'ರನ್ನ'ನಿಗೆ 'ಚಿನ್ನ' ಸಿಗುತ್ತಿಲ್ಲವಂತೆ

ನಟ ಸುದೀಪ್ ಅಭಿನಯದ, ಕೆ ಎಸ್ ರವಿಕುಮಾರ್ ನಿರ್ದೇಶನದ ದ್ವಿಭಾಷಾ (ಕನ್ನಡ ಮತ್ತು ತಮಿಳು) ಚಲನಚಿತ್ರ ಚಿತ್ರೀಕರಣಕ್ಕೆ ಸಿದ್ಧವಾಗಿದೆ.
ನಟ ಸುದೀಪ್
ನಟ ಸುದೀಪ್
Updated on

ಬೆಂಗಳೂರು: ನಟ ಸುದೀಪ್ ಅಭಿನಯದ, ಕೆ ಎಸ್ ರವಿಕುಮಾರ್ ನಿರ್ದೇಶನದ ದ್ವಿಭಾಷಾ (ಕನ್ನಡ ಮತ್ತು ತಮಿಳು) ಚಲನಚಿತ್ರ ಚಿತ್ರೀಕರಣಕ್ಕೆ ಸಿದ್ಧವಾಗಿದೆ. ಆದರೆ ನಿರ್ಮಾಪಕ ಸೂರಪ್ಪ ಬಾಪು ಹೇಳುವ ಪ್ರಕಾರ ಎಲ್ಲವೂ ಸಿದ್ದವಾಗಿದೆ ಆದರೆ, ನಾಯಕ ನಟಿಯನ್ನು ಅಂತಿಮಗೊಳಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಮುಂದುವರೆಯಲಾಗುತ್ತಿಲ್ಲ ಎಂದಿದ್ದಾರೆ.

"ಈ ಯೋಜನೆಗೋಸ್ಕರ ನಾಯಕ ನಟಿಯ ಆಯ್ಕೆಗೋಸ್ಕರ ಎಷ್ಟು ಜನರ ಮುಖ ನೋಡಿದ್ದೇನೋ ಲೆಕ್ಕವೇ ಇಲ್ಲ. ಸುದೀಪ್ ಸಾಮರ್ಥ್ಯಕ್ಕೆ ಸರಿಸಮನಾಗಬಲ್ಲ ನಾಯಕಿಯ ಶೋಧಕಾರ್ಯ ಮುಂದುವರೆಯುತ್ತಲೇ ಇದೆ. ಅಲ್ಲದೆ ಎರಡು ಭಾಷೆಗಳಲ್ಲಿ ಏಕಕಾಲಕ್ಕೆ ಸಿನೆಮಾ ನಿರ್ಮಿಸಲಾಗುತ್ತಿರುವುದರಿಂದ ಸಶಕ್ತ ನಾಯಕನಟಿಯ ಅವಶ್ಯಕತೆ ಇದೆ" ಎನ್ನುತ್ತಾರೆ ನಿರ್ಮಾಪಕ.

ಇವರು ಸೂಕ್ತ ಎಂದುಕೊಂಡಿರುವ ನಾಯಕ ನಟಿ ಇವರಿಗೆ ಸಮಯ ನೀಡುತ್ತಿಲ್ಲವಂತೆ. "ಕೆ ಎಸ್ ರವಿಕುಮಾರ್ ಒಳಗೊಂಡಂತೆ ನಮ್ಮ ಇಡೀ ತಂಡ ಸೂಕ್ತವಾದ ಹುಡುಗಿಗೆ ಹುಡುಕಾಟ ನಡೆಸಿದೆ. ಬೇರೆಲ್ಲ ಸಿದ್ಧವಿದ್ದರು ಮುಂದುವರೆಯಲಾಗುತ್ತಿಲ್ಲ. ಆದುದರಿಂದ ಇದಕ್ಕಾಗಿ ನಾನು ತೆರೆದ ಆಡಿಶನ್ ನಡೆಸಿದ್ದೇನೆ. ಸುದೀಪ್ ಎದುರು ನಟಿಸಲು ಇಚ್ಚಿಸುವವರು ಹಾಗು ಅವರ ಸಾಮರ್ಥ್ಯವನ್ನು ಸರಿಗಟ್ಟಬಲ್ಲವರು ನನ್ನ ಈ ಈಮೇಲ್ ವಿಳಾಸಕ್ಕೆ (rambabuproductions@gmail.com) ತಮ್ಮ ಫೋಟೋ ಮತ್ತು ಸ್ವವಿರಗಳನ್ನು ಕಳುಹಿಸಬಹುದು ಎನ್ನುತ್ತಾರೆ" ಸೂರಪ್ಪ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com