ಒಂದು ಸಾಲಿನ ಕಥೆಯೊಂದು 'ಬುಲೆಟ್ ಬಸ್ಯಾ' ಆದ ಕಥೆ

ಕನ್ನಡ ಸಿನೆಮಾರಂಗದಲ್ಲಿ ತಳವೂರಲು ೧೦೦ ಸಿನೆಮಗಳಿಗಿಂತಲೂ ಹೆಚ್ಚು ಸಿನೆಮಾಗಳಲ್ಲಿ ಮಣ್ಣು ಹೊತ್ತ ಹಾಸ್ಯ ನಟ ಶರಣ್ ಇಂದು ಬಹುಬೇಡಿಕೆಯುಳ್ಳ ನಾಯಕನಟ.
'ಬುಲೆಟ್ ಬಸ್ಯಾ' ಸಿನೆಮಾದ ಒಂದು ದೃಶ್ಯ
'ಬುಲೆಟ್ ಬಸ್ಯಾ' ಸಿನೆಮಾದ ಒಂದು ದೃಶ್ಯ
Updated on

ಬೆಂಗಳೂರು: ಕನ್ನಡ ಸಿನೆಮಾರಂಗದಲ್ಲಿ ತಳವೂರಲು ೧೦೦ ಸಿನೆಮಗಳಿಗಿಂತಲೂ ಹೆಚ್ಚು ಸಿನೆಮಾಗಳಲ್ಲಿ ಮಣ್ಣು ಹೊತ್ತ ಹಾಸ್ಯ ನಟ ಶರಣ್ ಇಂದು ಬಹುಬೇಡಿಕೆಯುಳ್ಳ ನಾಯಕನಟ. ಇವರ 'ಬುಲೆಟ್ ಬಸ್ಯಾ' ನಾಳೆ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಒಂದು ಸಾಲಿನ ಕಥೆ ಸಿನೆಮಾ ಆಗಿ ಬೆಳೆದಿದ್ದನು ಬಿಚ್ಚಿಡುವ ಶರಣ್ ಕಥೆಯ ಅಭಿವೃದ್ಧಿಯ ಹಿಂದೆ ಹಲವಾರು ಜನರ ಪರಿಶ್ರಮ ಇದೆ ಎನ್ನುತ್ತಾರೆ. "ನಿರ್ಮಾಪಕ ಜಯಣ್ಣ ಅವರಿಗೆ ಒಂದು ಸಾಲಿನ ಕಥೆ ಹೇಳಿದಾಗ ಅವರು ಕೂಡಲೆ ಒಪ್ಪಿಕೊಂಡರು. ಆದರೆ ಸಿನೆಮಾ ಕಥೆ ನನ್ನದೆಂದು ನಾನು ಹೇಳುವುದಿಲ್ಲ ನಾನು ಸಿನೆಮಾಗೆ ಎಂದೆಂದೂ ಬರೆದಿಲ್ಲ. ನನ್ನ ಜೊತೆ ಹಲವರು ಭಾಗಿಯಾಗಿದ್ದರು" ಎನ್ನುತ್ತಾರೆ ಶರಣ್.

ಈ ಕಥೆ ಬರೆಯಬೇಕು ಎಂದೇನು ಅನಿಸದೆ ಇದ್ದರು, ಕಥೆ ಅವರ ತಲೆಯಲ್ಲಿ ಗಿರಕಿ ಹೊಡೆಯುತ್ತಿತ್ತಂತೆ. "ನಾನು ವಿಕ್ಟರಿ ಸಿನೆಮಾ ಮಾಡುವಾಗ, ಕಥೆಯೊಂದನ್ನು ಸಿನೆಮಾ ಮಾಡುವ ಹೊಳಹು ತಲೆಗೆ ಹೊಕ್ಕಿತು. ಮೊದಲು ಥೈಲ್ಯಾಂಡಿನಲ್ಲಿ ಚಿತ್ರೀಕರಣ ಮಾಡುವಾಗ ನನ್ನ ಸಹ ನಟಿ ಅಸ್ಮಿತಾ ಸೂದ್ ಅವರಿಗೆ ಒಂದು ಸಾಲಿನ ಕಥೆ ಹೇಳಿದೆ. ಅವರ ತಕ್ಷಣ ಕೊಟ್ಟ ಪ್ರತಿಕ್ರಿಯೆ ನನಗೆ ಉತ್ತೇಜನ ನೀಡಿತು" ಎನ್ನುತ್ತಾರೆ ನಟ.

ಆಗ ಬರೆಯುವ ಅಭ್ಯಾಸದಲ್ಲಿ ತೊಡಗಿದ ಶರಣ್, ಕೆಲವು ಅಂಶಗಳನ್ನು ಪಟ್ಟಿ ಮಾಡುತ್ತಾ ಹೋದಂತೆ, ಕಥೆ ಕ್ರಮಬದ್ಧವಾಗಲ್ಲವಾದರೂ ಬೆಳೆಯುತ್ತಾ ಹೋಯಿತಂತೆ.

"ನಂತರ ಕೆಲವು ಒಳ್ಳೆಯ ಸಿನೆಮಾ ಬರಹಗಾರರೊಂದಿಗೆ ಕೂತು ಕಥಾ ಹಂದರಕ್ಕೆ ಸ್ವಲ್ಪ ಮೆರುಗು ನೀಡಿದ ನಂತರ ನಿರ್ದೇಶಕ ಜಯತೀರ್ಥ ಅವರ ಆಗಮನವಾಯಿತು" ಎನ್ನುತ್ತಾರೆ ಶರಣ್.

ಜಯಣ್ಣ ಮತ್ತು ಭೋಗೇಂದ್ರ ನಿರ್ಮಾಣದ ಈ ಸಿನೆಮಾಮದಲ್ಲಿ ಶರಣ್ ಕೂಡ ಒಂದು ಹಾಡು ಕೂಡ ಹಾಡಿದ್ದಾರೆ. ಹರಿಪ್ರಿಯ, ತಬಲಾ ನಾಣಿ, ರಂಗಾಯಣ ರಘು, ಗಿರಿಜಾ ಲೋಕೇಶ್, ಕುರಿ ಪ್ರತಾಪ್ ಹೀಗೆ ತಾರಾ ದಂಡೇ ಸಿನೆಮಾದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com