ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮುಂಗಾರು ಮಳೆ-2 ಮುಹೂರ್ತ

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಮುಂಗಾರು ಮಳೆ-2 ಸಿನಿಮಾದ ಮುಹೂರ್ತ ಜೂ.11 ರಂದು ನಡೆದಿದೆ.
ಮುಂಗಾರು ಮಳೆ-2 ಚಿತ್ರದ ಮುಹೂರ್ತ
ಮುಂಗಾರು ಮಳೆ-2 ಚಿತ್ರದ ಮುಹೂರ್ತ

ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್  ನಟಿಸುತ್ತಿರುವ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಮುಂಗಾರು ಮಳೆ-2 ಸಿನಿಮಾದ ಮುಹೂರ್ತ ಜೂ.11 ರಂದು ನಡೆದಿದೆ.

ಇ. ಕೆ ಪಿಕ್ಚರ್ ಲಾಂಛನದಡಿಯಲ್ಲಿ ಜಿ.ಗಂಗಾಧರ್ ನಿರ್ಮಿಸುತ್ತಿರುವ ಮುಂಗಾರು ಮಳೆ-2 ಕ್ಕೆ ನಿರ್ದೇಶಕ ಶಶಾಂಕ್ ಆಕ್ಷನ್ ಕಟ್ ಹೇಳಿದ್ದಾರೆ.  ಚಿತ್ರದ ಮುಹೂರ್ತ ರಾಜಾಜಿನಗರದ ಮೋದಿ ಸರ್ಕಲ್ ಬಳಿಯಿರುವ ದೇವಸ್ಥಾನದಲ್ಲಿ ನಡೆದಿದ್ದು ಮುಂಗಾರು ಮಳೆ ನಿರ್ಮಾಕಪ ಇ.ಕೃಷ್ಣಪ್ಪ, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಗೋಲ್ಡ್ ಫಿಂಚ್ ಗ್ರೂಪ್ ಆಫ್ ಹೊಟೇಲ್ ನ ಮಾಲೀಕರಾದ  ಪ್ರಕಾಶ್ ಶೆಟ್ಟಿ ಕ್ಯಾಮೆರಾ ಸ್ವಿಚ್ ಆನ್ ಮ್ಡುವುದರ ಮೂಲಕ  ಚಿತ್ರ ತಂಡಕ್ಕೆ ಶುಭ ಹಾರೈಸಿದರು. 

ಮುಂಗಾರು ಮಳೆ-2 ರ ಚಿತ್ರೀಕರಣ ಜುಲೈ ಕೊನೆಯ ವಾರದಿಂದ ಪ್ರಾರಂಭವಾಗಲಿದೆ, ಪ್ರಸ್ತುತ  ಮುಂಗಾರು ಮಳೆಯ-2 ರ ನಾಯಕಿಯ ಪಾತ್ರ ನಿರ್ವಹಿಸುವ ನಟಿಗಾಗಿ ಹುಡುಕಾಟ ನಡೆದಿದೆ. ಮುಂಗಾರು ಮಳೆ-1 ಬಿಡುಗಡೆಯಾದ  9 ವರ್ಷಗಳ  ಬಳಿಕ ಭಾಗ-2 ರ ಮುಹೂರ್ತ ನಡೆದಿದ್ದು, 9 ವರ್ಷಗಳ ಹಿಂದೆ ಮುಂಗಾರು ಮಳೆ ನಡೆಸಿದ್ದ ಮ್ಯಾಜಿಕ್ ಈಗಲೂ ನಡೆಯಲಿದೆಯೇ ಎಂಬ ಕುತೂಹಲ ಮೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com