ಬೆಂಗಳೂರು : ಕ್ರೇಜಿ ಸ್ಟಾರ್ ರವಿಚಂದ್ರನ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿರುವ ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಮುಂಗಾರು ಮಳೆ-2 ಸಿನಿಮಾದ ಮುಹೂರ್ತ ಜೂ.11 ರಂದು ನಡೆದಿದೆ.
ಇ. ಕೆ ಪಿಕ್ಚರ್ ಲಾಂಛನದಡಿಯಲ್ಲಿ ಜಿ.ಗಂಗಾಧರ್ ನಿರ್ಮಿಸುತ್ತಿರುವ ಮುಂಗಾರು ಮಳೆ-2 ಕ್ಕೆ ನಿರ್ದೇಶಕ ಶಶಾಂಕ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಮುಹೂರ್ತ ರಾಜಾಜಿನಗರದ ಮೋದಿ ಸರ್ಕಲ್ ಬಳಿಯಿರುವ ದೇವಸ್ಥಾನದಲ್ಲಿ ನಡೆದಿದ್ದು ಮುಂಗಾರು ಮಳೆ ನಿರ್ಮಾಕಪ ಇ.ಕೃಷ್ಣಪ್ಪ, ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು. ಗೋಲ್ಡ್ ಫಿಂಚ್ ಗ್ರೂಪ್ ಆಫ್ ಹೊಟೇಲ್ ನ ಮಾಲೀಕರಾದ ಪ್ರಕಾಶ್ ಶೆಟ್ಟಿ ಕ್ಯಾಮೆರಾ ಸ್ವಿಚ್ ಆನ್ ಮ್ಡುವುದರ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದರು.
ಮುಂಗಾರು ಮಳೆ-2 ರ ಚಿತ್ರೀಕರಣ ಜುಲೈ ಕೊನೆಯ ವಾರದಿಂದ ಪ್ರಾರಂಭವಾಗಲಿದೆ, ಪ್ರಸ್ತುತ ಮುಂಗಾರು ಮಳೆಯ-2 ರ ನಾಯಕಿಯ ಪಾತ್ರ ನಿರ್ವಹಿಸುವ ನಟಿಗಾಗಿ ಹುಡುಕಾಟ ನಡೆದಿದೆ. ಮುಂಗಾರು ಮಳೆ-1 ಬಿಡುಗಡೆಯಾದ 9 ವರ್ಷಗಳ ಬಳಿಕ ಭಾಗ-2 ರ ಮುಹೂರ್ತ ನಡೆದಿದ್ದು, 9 ವರ್ಷಗಳ ಹಿಂದೆ ಮುಂಗಾರು ಮಳೆ ನಡೆಸಿದ್ದ ಮ್ಯಾಜಿಕ್ ಈಗಲೂ ನಡೆಯಲಿದೆಯೇ ಎಂಬ ಕುತೂಹಲ ಮೂಡಿದೆ.
Advertisement