ಒಂದೇ ವೇದಿಕೆಯಲ್ಲಿ ಶಿವಣ್ಣ, ದರ್ಶನ್, ಯಶ್

ಚಲುವರಾಯಸ್ವಾಮಿ ಮಗ ಸಚಿನ್, ಹಾಗೂ ಕಾಂಗ್ರೆಸ್ ಮುಖಂಡ ಎಚ್.ಎಂ ರೇವಣ್ಣ ಪುತ್ರ ಅನೂಪ್ ಕನ್ನಡ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಲು ಮುಂದಾಗಿದ್ದಾರೆ.
ಚಲುವರಾಯ ಸ್ವಾಮಿ ಪುತ್ರನ ಸಿನಿಮಾ ಮೂಹೂರ್ತದಲ್ಲಿ ಸಿನಿಮಾ ನಟರು
ಚಲುವರಾಯ ಸ್ವಾಮಿ ಪುತ್ರನ ಸಿನಿಮಾ ಮೂಹೂರ್ತದಲ್ಲಿ ಸಿನಿಮಾ ನಟರು

ಮೂವರು ರಾಜಕಾರಣಿಗಳ ಪುತ್ರರು ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್, ಚಲುವರಾಯಸ್ವಾಮಿ ಮಗ ಸಚಿನ್, ಹಾಗೂ ಕಾಂಗ್ರೆಸ್ ಮುಖಂಡ ಎಚ್.ಎಂ ರೇವಣ್ಣ ಪುತ್ರ ಅನೂಪ್ ಕನ್ನಡ ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಿಲು ಮುಂದಾಗಿದ್ದಾರೆ.

ಚಲುವರಾಯ್ ಸ್ವಾಮಿ ಮಗನ ಚಿತ್ರ ಹ್ಯಾಪಿ ಬರ್ತಡೇ ಚಿತ್ರದ ಮೂಹೂರ್ತ ಕಾರ್ಯಕ್ರಮದಲ್ಲಿ ರಾಜಕಾರಣಿಗಳು ಹಾಗೂ ಚಿತ್ರರಂಗದ ಪ್ರಮುಖ ಸ್ಟಾರ್ ಗಳು ಭಾಗವಹಿಸಿದ್ದರು. ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಮೂಹೂರ್ತ ಕಾರ್ಯಕ್ರಮ ನಡೆಯಿತು.

ಮೊದಲ ದೃಶ್ಯಕ್ಕೆ ಮಾಜಿ ಪ್ರಧಾನಿ  ದೇವೇಗೌಡ ಕ್ಲಾಪ್ ಮಾಡಿದರು. ಕುಮಾರ ಸ್ವಾಮಿ, ಅಂಬರೀಶ್, ಸೇರಿದಂತೆ ರಾಜಕರಾಣಿಗಳ ದಂಡೇ ಹರಿದು ಬಂದಿತ್ತು.

ಇನ್ನು ಚಿತ್ರರಂಗದ ಸ್ಟಾರ್ ನಟರುಗಳಾದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಚಾಲೆಂಜಿಂಗ್ ಸ್ಚಾರ್ ದರ್ಶನ್, ಹಾಗೂ ರಾಕಿಂಗ್ ಸ್ಟಾರ್ ಯಶ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು, ನಿರ್ಮಲಾನಂದ ಸ್ವಾಮೀಜಿ ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com