ಚೆನ್ನೈ: 'ಕಾಕ ಮುಟ್ಟೈ' ತಮಿಳು ಸಿನೆಮಾ ಬಾಲನಟರಾದ ರಮೇಶ್ ಮತ್ತು ವಿಜ್ಞೇಶ್ ಅವರ ಭವಿಷ್ಯಕ್ಕಾಗಿ ಚಲನಚಿತ್ರದ ನಿರ್ಮಾಪಕರು ಹಾಗು ಸಿನೆಮಾ ಅರ್ಪಣೆ ಮಾಡಿದ ಫಾಕ್ಸ್ ಸ್ಟಾರ್ ಸ್ಟುಡಿಯೋ, ಭೂಮಿ ಎಂಬ ಚಾರಿಟಿ ಸಂಸ್ಥೆಯ ಜೊತೆ ಕೈಜೋಡಿಸಿದ್ದು, ಧನಸಹಾಯ ಮಾಡಲಿದ್ದಾರೆ.
"ಈ ಇಬ್ಬರೂ ನಟರ ವಿದ್ಯಾಭ್ಯಾಸ ಮತ್ತು ಇತರ ಅನುಕೂಲಗಳಿಗಾಗಿ ಚೆನ್ನೈ ಮೂಲದ ಎನ್ ಜಿ ಒ ದಲ್ಲಿ ದೊಡ್ಡ ಮೊತ್ತವನ್ನು ಕಾಯ್ದಿರಿಸಲಾಗಿದೆ. ಮಕ್ಕಳು ೨೧ ತುಂಬುವವರೆಗೆ ಅವರಿಗೆ ನೆರವು ನೀಡಲು ಮತ್ತು ಅವರ ಪ್ರಗತಿಯತ್ತ ಗಮನ ನೀಡಲು ಭೂಮಿ ಸಂಸ್ಥೆಗೆ ವಹಿಸಲಾಗಿದೆ.
"ಅವರ ೨೧ ನೆ ವಯಸ್ಸಿಗೆ ಸಂಪೂರ್ಣ ಹಣವನ್ನು ಮಕ್ಕಳ ಮುಂದಿನ ಭವಿಷ್ಯದ ಯೋಜನೆಗಳಿಗೆ ನೀಡಲಾಗುವುದು" ಎಂದು ಫಾಕ್ಸ್ ಸ್ಟಾರ್ ಸ್ಟುಡಿಯೋ ತಿಳಿಸಿದೆ.
ಮಕ್ಕಳು ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಳ್ಳುವುದಾಗಿ ನಟ ಧನುಶ್, ನಿರ್ದೇಶಕ ನಿರ್ಮಾಪಕ ವೆಟ್ರಿಮಾರನ್ ಈ ಹಿಂದೆಯೇ ಘೋಷಿಸಿದ್ದರು.
Advertisement