ನಾಗತಿಹಳ್ಳಿ ಚಂದ್ರಶೇಖರ್ ಮೇಲೆ ಹೆಜ್ಜೇನು ದಾಳಿ: ಐಸಿಯು ಗೆ ದಾಖಲು

ನಿರ್ದೇಶಕ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಹೆಜ್ಜೇನು ಕಡಿತಕ್ಕೊಳಕಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. ...
ನಾಗತಿಹಳ್ಳಿ ಚಂದ್ರಶೇಖರ್
ನಾಗತಿಹಳ್ಳಿ ಚಂದ್ರಶೇಖರ್

ಕುಂದಾಪುರ: ಕನ್ನಡ ಚಿತ್ರರಂಗದ ಹೆಸರಾಂತ ನಿರ್ದೇಶಕ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಹೆಜ್ಜೇನು ಕಡಿತಕ್ಕೊಳಕಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ಸಮೀಪದ ಬರ್ವೆ ಎಂಬಲ್ಲಿ ಹಿನ್ನೀರ ಪ್ರದೇಶದಲ್ಲಿ ತಮ್ಮ ನಿರ್ದೇಶನದ ಹೊಸ ಚಿತ್ರ 'ಇಷ್ಟಕಾಮ್ಯ'ದ ಶೂಟಿಂಗ್‌ ಸಂದರ್ಭದಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.

ಚಂದ್ರಶೇಖರ್‌ ಮಾತ್ರವಲ್ಲದೆ ಚಿತ್ರದ ಕ್ಯಾಮೆರಾಮೆನ್‌ ಚಂದ್ರು ಹಾಗೂ ನಾಗತಿಹಳ್ಳಿ ಅವರ ಕಾರು ಚಾಲಕ ಕೃಷ್ಣ ಅವರಿಗೂ ಹೆಜ್ಜೇನು ಕಚ್ಚಿರುವುದಾಗಿ ಹೇಳಲಾಗಿದೆ. ನಾಗತಿಹಳ್ಳಿ ಚಂದ್ರಶೇಖರ್‌ ಅವರನ್ನು ಇದೀಗ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತುರ್ತು ನಿಗಾ ಚಿಕಿತ್ಸಾ ಘಟದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com