ಬಹುಭಾಷಾ ನಟ ವಿನೋದ್ ಆಳ್ವ ಬಂಧನ

ಯಕ್ತಿಯೊಬ್ಬರಿಗೆ ಕೊಲೆ ಬೆದರಿಕೆ ಆರೋಪದ ಮೇಲೆಬಹುಭಾಷಾ ನಟ ವಿನೋದ್ ಆಳ್ವಾ ಅವರನ್ನು ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ಪೊಲೀಸರು ...
ವಿನೋದ್ ಆಳ್ವ
ವಿನೋದ್ ಆಳ್ವ

ಪುತ್ತೂರು: ವ್ಯಕ್ತಿಯೊಬ್ಬರಿಗೆ ಕೊಲೆ ಬೆದರಿಕೆ ಆರೋಪದ ಮೇಲೆಬಹುಭಾಷಾ ನಟ ವಿನೋದ್ ಆಳ್ವಾ ಅವರನ್ನು ಪುತ್ತೂರು ತಾಲೂಕಿನ ಈಶ್ವರಮಂಗಲದಲ್ಲಿ ಪೊಲೀಸರು ಬಂಧಿಸಿದ್ದಾರೆ.

ನಟ ವಿನೋದ್ ಆಳ್ವಾ ಅವರ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಸಚ್ಚಿದಾನಂದ ಎಂಬುವರು, ತನಗೆ ಆಳ್ವಾ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಸಂಪ್ಯಾ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ವಿನೋದ್‌ ಆಳ್ವಾರ ಜೀಪು ಚಾಲಕ ಉದಯ ಚೆಕ್ಕಿತ್ತಾಯ, ಸಚ್ಚಿದಾನಂದ ಅವರನ್ನು ನಿನ್ನೆ ಬೆಳಗ್ಗೆ ಜೀಪು ಅಪಘಾತ ಮಾಡಿ ಕೊಲ್ಲಲು ಯತ್ನಿಸಿದ್ದಾರೆ ಎಂದು ಸಂಪ್ಯಾ ಠಾಣೆಯಲ್ಲಿ ದೂರು ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ವಿನೋದ್‌ ಆಳ್ವಾ ಮತ್ತು ಉದಯ ಚೆಕ್ಕಿತ್ತಾಯರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಸಚ್ಚಿದಾನಂದ ಅವರ ದೂರಿನನ್ವಯ ಸಂಪ್ಯಾ ಠಾಣೆಯ ಪೊಲೀಸರು ನಟ ವಿನೋದ್ ಆಳ್ವಾ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com