'ಕಲ್ಪಾನ'ಗೆ ಹುರಿಗೊಳ್ಳುತ್ತಿರುವ ಉಪೇಂದ್ರ

ರಾಘವ ಲಾರೆನ್ಸ್ ಅವರ ಕಾಂಚನ ಸಿನೆಮಾ ಸರಣಿ ತಮಿಳು ಚಿತ್ರರಂಗದಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿ ಮನಗೆದ್ದಿದ್ದು ಈಗ ಇತಿಹಾಸ. ಇದರಿಂದ ಸ್ಫೂರ್ತಿಗೊಂಡು ಕನ್ನಡ ನಟ ಉಪೇಂದ್ರ
ಕಲ್ಪನಾ-೨ ಸಿನೆಮಾದಲ್ಲಿ ಉಪೇಂದ್ರ
ಕಲ್ಪನಾ-೨ ಸಿನೆಮಾದಲ್ಲಿ ಉಪೇಂದ್ರ
Updated on

ಬೆಂಗಳೂರು: ರಾಘವ ಲಾರೆನ್ಸ್ ಅವರ ಕಾಂಚನ ಸಿನೆಮಾ ಸರಣಿ ತಮಿಳು ಚಿತ್ರರಂಗದಲ್ಲಿ ಪ್ರೇಕ್ಷಕರಿಗೆ ಮೋಡಿ ಮಾಡಿ ಮನಗೆದ್ದಿದ್ದು ಈಗ ಇತಿಹಾಸ. ಇದರಿಂದ ಸ್ಫೂರ್ತಿಗೊಂಡು ಕನ್ನಡ ನಟ ಉಪೇಂದ್ರ ಅದಕ್ಕೆ ತಮ್ಮದೇ ಆದ ಹೊಳಹುಗಳನ್ನು ಸೇರಿಸುತ್ತಿದ್ದಾರೆ.

ಕಲ್ಪನಾ -೨ ತಮಿಳಿನ ಕಾಂಚನ೨ ರಿಮೇಕ್. ಲಾರೆನ್ಸ್ ಅವರ ಮೂಲಕ್ಕಿಂತಲೂ ವಿಭಿನ್ನವಾಗಿ ಮಾಡುವುದು ನಿರ್ದೇಶಕ ಆರ್ ಅನಂತ ರಾಜು ಅವರಿಗೆ ಸವಾಲಂತೆ. "ಲಾರೆನ್ಸ್ ಅವರಿಗೆ ದೊಡ್ಡ ನಟರನ್ನು ನಿಭಾಯಿಸುವ ಕಷ್ಟವಿರಲಿಲ್ಲ. ಅವರು ಪಾತ್ರದ ಜೊತೆ ಸಾಮಾನ್ಯವಾಗಿ ಆಟವಾಡಿದರು. ಇಲ್ಲಿ ಉಪೇಂದ್ರ ಇರುವುದರಿಂದ ಸನ್ನಿವೇಶ ಬದಲಾಗಿದೆ" ಎನ್ನುತ್ತಾರೆ.

ಉಪೇಂದ್ರ ಅವರ ಇಮೇಜ್ ಮತ್ತು ಪಾತ್ರವನ್ನು ಸರಿದೂಗಿಸುವುದು ಪ್ರಮುಖ ಸವಾಲು ಎನ್ನುವ ನಿರ್ದೇಶಕ "ಉಳಿತ ಪಾತ್ರವರ್ಗದ ಪರಿಕಲ್ಪನೆ ಅದೇ ಆಗಿರುತ್ತದೆ" ಎನ್ನುತ್ತಾರೆ. ದ್ವಿತೀಯಾರ್ಧದ ಕಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರುವುದಾಗಿ ತಿಳಿಸುವ ಅನಂತ "ಮೂಲದಲ್ಲಿ ಒಂದೇ ದಿನದಲ್ಲಿ ನಡೆಯುವ ಹಲವಾರು ಘಟನೆಗಳನ್ನು ತೋರಿಸಿದ್ದಾರೆ. ಇಲ್ಲಿ ನಮ್ಮ ಪ್ರೇಕ್ಷಕರಿಗೆ ಅದು ಕರಗತವಾಗುವುದು ಸ್ವಲ ಕಷ್ಟ. ಇಲ್ಲಿ ಕ್ರಮಬದ್ಧವಾಗಿ ಸ್ಪಷ್ಟತೆಯನ್ನು ಕೋರುತ್ತಾರೆ. ಹಾಗೆಯೇ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ" ಎನ್ನುತ್ತಾರೆ.

ಪ್ರಿಯಾಮಣಿ ನಾಯಕನಟಿಯಾಗಿದ್ದು ಉಪೇಂದ್ರ ಎದುರು ಇದೇ ಮೊದಲ ಬಾರಿಗೆ ನಟಿಸುತ್ತಿದ್ದಾರೆ. ಪ್ರಕಾಶ್ ಹೆಬ್ಗೋಡು ಖಳನಾಯಕ. ಪೆಟ್ರೋಲ್ ಪ್ರಸನ್ನ ಮತ್ತು ವಿಕ್ಟರಿ ವಾಸು ತಾರಾಗಣದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com