ಬೆಂಗಳೂರು: ಸುವರ್ಣ ಮನರಂಜಾ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ 'ಬೆಂಗಳೂರ್ ಬೆಣ್ಣೆ ದೋಸೆ' ಕಾಮಿಡಿ ಶೋನಿಂದ ನಟಿ ನೀತು ಹೊರ ನಡೆದಿದ್ದಾರೆ.
ಬೆಂಗಳೂರ್ ಬೆಣ್ಣೆ ದೋಸೆ ಕಾರ್ಯಕ್ರಮ ಕುರಿತ ಹಲವು ವಿಚಾರಗಳಲ್ಲಿ ನನಗೆ ಸಹಮತವಿರಲಿಲ್ಲ. ಕೆಲವು ವಿಚಾರಗಳು ನನಗೆ ಇಷ್ಟವಾಗದ ಕಾರಣ 4 ಎಪಿಸೋಡುಗಳ ಶೂಟಿಂಗ್ ನಂತರ ಹೊರಬರಲು ತಿರ್ಮಾನಿಸಿದ್ದೆ ಎಂದು ನೀತು ಸ್ಪಷ್ಟ ಪಡಿಸಿದ್ದಾರೆ.
ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಈ ಕಾಮಿಡಿ ಶೋ ಗೆ ಅರುಣ್ ಸಾಗರ್ ನಿರೂಪಕರಾಗಿದ್ದು, ನರ್ಸ್ ಜಯಲಕ್ಷ್ಮಿ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ.