ಹಾಗಾದ್ರೆ, ಈ ಚಿತ್ರಕಥೆಯ ವಿಶೇಷ ಏನು? 'ಇಂದು ಎಲ್ಲರೂ ಸಂಕೀರ್ಣ ಸಮಸ್ಯೆಯ ಸುಳಿಗೆ ಸಿಲುಕುತ್ತಿದ್ದಾರೆ. ಇಂಥದ್ದೇ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ಕಥಾ ನಾಯಕಿಗೆ, ಆಕಸ್ಮಿಕವಾಗಿ ಪರಿಚಯವಾದ ಚಿಕ್ಕ ವಯಸ್ಸಿನ ಯುವಕನೊಬ್ಬ ತನ್ನ ಜಾಣ್ಮೆಯಿಂದ ಆಕೆಯ ಸ್ನೇಹ ಸಂಪಾದಿಸಿ, ಸಮಸ್ಯೆಯಿಂದ ಪಾರು ಮಾಡುತ್ತಾನಂತೆ. ಇದು ಈ ಕಾಲದ ರಿಯಾಲಿಟಿ. ಈ ಕಥೆ ಪ್ರತಿಯೊಬ್ಬರನ್ನೂ ತಲುಪುತ್ತದೆ' ಅಂತಾರೆ ನಿರ್ದೇಶಕ ಮದನ್ರಾಮ್ ವೆಂಕಟೇಶ್. ಈ ಕಥೆಗೆ ಶ್ರುತಿ ಹರಿಹರನ್ ಆಯ್ಕೆಯಾಗಿದ್ದೂ ಕೌತುಕವೇ.