ಬೆಂಗಳೂರು: ರಜನಿಕಾಂತ್, ಶರತ್ ಕುಮಾರ್, ಕಮಲ ಹಾಸನ್, ಶಿವಾಜಿ ಗಣೇಶನ್, ಸೂರ್ಯ, ಅಜಿತ್ ಕುಮಾರ್, ಮಾಧವನ್ ಮುಂತಾದ ಖ್ಯಾತ ತಮಿಳು ತಾರೆಯರು ಹಾಗು ತೆಲುಗಿನ ಚಿರಂಜೀವಿ, ನಾಗಾರ್ಜುನ ಮುಂತಾದವರನ್ನು ನಿರ್ದೇಶಿಸಿರುವ ನಟ-ನಿರ್ದೇಶಕ ಕೆ ಎಸ್ ರವಿಕುಮಾರ್ ಕಮರ್ಷಿಯಲ್ ಸಿನೆಮಾಗಳ ಬಗ್ಗೆ ಯಾವುದೇ ಸಂಶಯವಿಲ್ಲದ ಬೆಂಬಲಿಗ. "ಹಣವಿರುವುದೇ ಅಲ್ಲಿಯೇ" ಎಂದು ನಗುತ್ತ ನುಡಿಯುತ್ತಾರೆ ನಿರ್ದೇಶಕ.