ಬಂಧನ ಭೀತಿ; ಕುಡಿದು ಚಾಲನೆ ಮಾಡಿದ್ದ ನಟ ಅರುಣ್ ವಿಜಯ್ ನಾಪತ್ತೆ

ಕನ್ನಡದ ಚಕ್ರವ್ಯೂಹ ಚಿತ್ರದಲ್ಲಿ ಪುನೀತ್ ಎದುರಿಗೆ ವಿಲನ್ ಆಗಿ ನಟಿಸಿದ್ದ ತಮಿಳು ನಟ ಅರುಣ್ ವಿಜಯ್ ಪಾನಮತ್ತ ಚಾಲನೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದು ಇದೀಗ...
ಅರುಣ್ ವಿಜಯ್
ಅರುಣ್ ವಿಜಯ್
Updated on

ಚೆನ್ನೈ: ಕನ್ನಡದ ಚಕ್ರವ್ಯೂಹ ಚಿತ್ರದಲ್ಲಿ ಪುನೀತ್ ಎದುರಿಗೆ ವಿಲನ್ ಆಗಿ ನಟಿಸಿದ್ದ ತಮಿಳು ನಟ ಅರುಣ್ ವಿಜಯ್ ಪಾನಮತ್ತ ಚಾಲನೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದು ಇದೀಗ ನಾಪತ್ತೆಯಾಗಿದ್ದಾರೆ.

ಕ್ರಿಕೆಟಿಗ ಅಭಿಮನ್ಯು ಮಿಥುನ್ ಮತ್ತ ನಟಿ ರಾಧಿಕಾ ಶರತ್ ಕುಮಾರ್ ಪುತ್ರಿ ರಯಾನೆ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅರುಣ್ ವಿಜಯ್ ಅಲ್ಲಿಂದ ಹೊರಟು ಬರುವಾಗ ಬೆಳಗ್ಗೆ 3 ಸುಮಾರಿಗೆ ನಂಗಮಕ್ಕಂ ಪೊಲೀಸ್ ಠಾಣೆ ಹೊರಗಡೆ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದರು.

ಈ ವೇಳೆ ಅರುಣ್ ವಿಜಯ್ ಪಾನಪತ್ತರಾಗಿದ್ದು ಅವರು ವಿರುದ್ಧ ಕುಡಿದು ವಾಹನ ಚಾಲನೆ ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಹೇಳಿದ್ದು ಸೋಮವಾರದಿಂದ ನಟ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಬಿಎಂಡಬ್ಲ್ಯೂ ಕಾರಿನಲ್ಲಿ ಪತ್ನಿ ಮತ್ತು ಮಗುವಿನೊಂದಿಗೆ ಮರುಳುತ್ತಿದ್ದಾಗ ಈ ಘಟನೆ ಸಂಭವಿಸಿತ್ತು. ಸದ್ಯ ಅರುಣ್ ವಿಜಯ್ ಕಾರನ್ನು ಪಾಂಡಿ ಬಜಾರ್ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com