ತಾಯಿ-ಮಗುವಿನ ಸುತ್ತ ಸುತ್ತುವ ಧಾರಾವಾಹಿ 'ವಾರಸ್ದಾರ'

ಕನ್ನಡದ ಸ್ಟಾರ್ ನಟ ಸುದೀಪ್ ಗೆ ಕಿರುತೆರೆ ಕೂಡ ಹೊಸದೇನಲ್ಲ. ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುವ...
ಸುದೀಪ್ ಮತ್ತು ಚಿತ್ರಾಲಿ, ವಾರಸ್ದಾರ ಧಾರವಾಹಿಯ ಮೊದಲ ನೋಟ
ಸುದೀಪ್ ಮತ್ತು ಚಿತ್ರಾಲಿ, ವಾರಸ್ದಾರ ಧಾರವಾಹಿಯ ಮೊದಲ ನೋಟ
ಕನ್ನಡದ ಸ್ಟಾರ್ ನಟ ಸುದೀಪ್ ಗೆ ಕಿರುತೆರೆ ಕೂಡ ಹೊಸದೇನಲ್ಲ. ಈಗಾಗಲೇ ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಜನಪ್ರಿಯರಾಗಿದ್ದಾರೆ. ಇದೀಗ ವಾರಸ್ದಾರ ಎಂಬ ಧಾರವಾಹಿಯನ್ನು ನಿರ್ಮಿಸುತ್ತಿದ್ದಾರೆ.
ಇದರಲ್ಲಿ ನಟಿ ಯಜ್ಞ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಕಿರುತೆರೆಗೆ ಅವರು ಪಾದಾರ್ಪಣೆ ಮಾಡಿದ್ದಾರೆ. ಡ್ರಾಮಾ ಜ್ಯೂನಿಯರ್ಸ್ ನ ವಿಜೇತೆ ಬಾಲಕಿ ಚಿತ್ರಾಲಿ ಕೂಡ ಈ ಧಾರವಾಹಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾಳೆ. 
ಚಿತ್ರಾಲಿಯನ್ನು ಆಯ್ಕೆ ಮಾಡಿದ್ದು ಸುದೀಪ್ ಅವರೇ. ಆಕೆಯ ನಟನಾ ಸಾಮರ್ಥ್ಯಕ್ಕೆ ಸುದೀಪ್ ಮಾರುಹೋಗಿದ್ದಾರಂತೆ.
ಗಡ್ಡ ವಿಜಿ ನಿರ್ದೇಶಿಸುತ್ತಿರುವ ವಾರಸ್ದಾರ ಧಾರವಾಹಿಯಲ್ಲಿ ರವಿ ಚೇತನ್, ವೀಣಾ ಪೊನ್ನಪ್ಪ, ರಮೇಶ್ ಪಂಡಿತ್, ವೀಣಾ ವೆಂಕಟೇಶ್, ರಾಮ್ ಮೊದಲಾದವರು ಅಭಿನಯಿಸುತ್ತಿದ್ದಾರೆ.
ಮಹಿಳೆಯರು ಹೆಣ್ಣು ಮಗುವಿಗೆ ಜನ್ಮ ನೀಡಿದಾಗ ಎದುರಿಸುವ ತೊಂದರೆಗಳನ್ನು ವಾರಸ್ದಾರ ಧಾರವಾಹಿಯ ಕಥೆ ಒಳಗೊಂಡಿದೆ. ಶಿವಪುರ ಜಿಲ್ಲೆಯ ಕಥೆ ಹೆಣೆಯಲಾಗಿದೆ. ಡಿಸೆಂಬರ್ 19ರಿಂದ ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. 
ಸುದೀಪ್ ಅವರು ನಿರ್ಮಾಪಕರಾಗಿರುವುದರಿಂದ ಧಾರವಾಹಿಗೆ ಸಿನಿಮಾ  ನಿರ್ಮಾಣದ ಗುಣಮಟ್ಟವನ್ನು ಅಳವಡಿಸಲಾಗಿದೆ. ನುರಿತ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com