ಹಲವು ಇತರ ಸಾಮಾಜಿಕ ಕಾರ್ಯಕರ್ತರ ಜೊತೆಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡುವುದಾಗಿ ತಿಳಿಸುತ್ತಾರೆ ಚೇತನ್. ಅವರ ಬೇಡಿಕೆ ಕೇವಲ ಭೂಮಿಯಲ್ಲ ಬದಲಿಗೆ ಮಾನವ ಹಕ್ಕುಗಳನ್ನು ಉಲ್ಲಂಘಿಸಿರುವ ಪೊಲೀಸರು, ಸರ್ಕಾರಿ ಪ್ರತಿನಿಧಿಗಳು ಮತ್ತು ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಬೇಡಿಕೆ ಕೂಡ ಅವರದ್ದು. "ಯಾವುದೇ ಸೂರಿಲ್ಲದೆ, ಬಯಲಿನಲ್ಲಿ ಅವರು ೧೩ ದಿನಗಳಿಂದ ವಾಸಿಸುತ್ತಿದ್ದಾರೆ" ಎನ್ನುವ ಚೇತನ್ ಅವರ ಹಕ್ಕುಗಳನ್ನು ದೊರಕಿಸಿಕೊಡುವವರೆಗೂ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. "ನಾನು ಅವರನ್ನು ಭೇಟಿ ಮಾಡಿ ನಂತರ ಹಿಂದಿರುಗಿ ಯಾವುದೊ ಅದ್ದೂರಿ ರೆಸಾರ್ಟ್ ನಲ್ಲಿ ರಾತ್ರಿ ಕಳೆಯುವುದು ಸಲ್ಲ. ಅದು ನನ್ನ ಸಿದ್ದಾಂತಕ್ಕೆ ವಿರೋಧ" ಎನ್ನುತ್ತಾರೆ ನಟ ಚೇತನ್.