ತಮ್ಮ ಹಿಂದಿನ ಸಿನೆಮಾ 'ಆಟಗಾರ'ನ ಯಶಸ್ಸು, 'ಆಕೆ' ಸಿನೆಮಾದೆಡೆಗೆ ಚೈತನ್ಯ ಅವರನ್ನು ಕೊಂಡೊಯ್ಯಿತಂತೆ. "'ಆ ದಿನಗಳು' ದಿನದಿಂದಲೂ ನಾನು ಇಂಗ್ಲೆಂಡಿನ ಮೂಲದ ನಿರ್ಮಾಪಕ ಸುನಂದಾ ಮುರಳಿ ಮನೋಹರ್ ಅವರನ್ನು ಬಲ್ಲೆ. ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಒದಗಿ ಬಂದಿರಲಿಲ್ಲ. ನಂತರ ಅವರು ಯೋಗೀಶ್ ಅವರನ್ನು ಸಂಪರ್ಕಿಸಿದರು, ಆಗ ನನ್ನ ಪ್ರಸ್ತಾಪ ಬಂದು ನಾನು ನಿರ್ದೇಶಕನಾದೆ ಮತ್ತು ಯೋಗೀಶ್ ಕಾರ್ಯಕಾರಿ ನಿರ್ಮಾಪಕರಾದರು" ಎನ್ನುತ್ತಾರೆ.