ವರದರಾಜು ಜೀವನ ಶೀಘ್ರದಲ್ಲೇ ಸಿನೆಮಾ ಆಗಲಿದೆ: ಶಿವರಾಜ್ ಕುಮಾರ್

ರಂಗಭೂಮಿ ಕಲಾವಿದರಾದ ಡಿಂಗ್ರಿ ನಾಗರಾಜು ಮತ್ತು ಕೊಟ್ಟೂರು ಕೋಮಲಮ್ಮ ಈ ವರ್ಷದ 'ಎಸ್ ಪಿ ವರದರಾಜು ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ.
ವರನಟ ರಾಜಕುಮಾರ್ ಅವರ ತಮ್ಮ ದಿವಂಗತ ಎಸ್ ಪಿ ವರದರಾಜ್
ವರನಟ ರಾಜಕುಮಾರ್ ಅವರ ತಮ್ಮ ದಿವಂಗತ ಎಸ್ ಪಿ ವರದರಾಜ್

ಬೆಂಗಳೂರು: ರಂಗಭೂಮಿ ಕಲಾವಿದರಾದ ಡಿಂಗ್ರಿ ನಾಗರಾಜು ಮತ್ತು ಕೊಟ್ಟೂರು ಕೋಮಲಮ್ಮ ಈ ವರ್ಷದ 'ಎಸ್ ಪಿ ವರದರಾಜು ಪ್ರಶಸ್ತಿ'ಗೆ ಪಾತ್ರರಾಗಿದ್ದಾರೆ. ಭಾನುವಾರ ಈ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಬೆಂಗಳೂರಿನ ಯವನಿಕಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಮಾತನಾಡಿದ ನಟ ಶಿವರಾಜಕುಮಾರ್, ತಮ್ಮ ಚಿಕ್ಕಪ್ಪ ಎಸ್ ಪಿ ವರದರಾಜ್ ಅವರ ಜೀವನಾಧಾರಿತ ಸಿನೆಮಾವನ್ನು ಶೀಘ್ರದಲ್ಲೇ ನಿರ್ಮಿಸಲಾಗುವುದು ಎಂದಿದ್ದಾರೆ.

ಈ ಸಿನೆಮಾದ ಹೆಸರು 'ಅಪ್ಪಣ್ಣ' ಇರಬಹುದು ಎಂಬ ಸುಳಿವು ಕೂಡ ನೀಡಿದ್ದಾರೆ. ವರನಟ ರಾಜಕುಮಾರ್ ಅವರ ತಮ್ಮ ವರದರಾಜ್ ಅವರನ್ನು ಪ್ರೀತಿಯಿಂದ ಅಪ್ಪಣ್ಣ ಎಂದೆ ಕರೆಯಲಾಗುತ್ತಿತ್ತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ರಾಜಕುಮಾರ್ ಅವರ ಜೀವನ ರೂಪಿಸುವುದಕ್ಕೆ ಕಾರಣರಾದ ವರದರಾಜ್ ಅವರ ಕಾಣಿಕೆಗಳನ್ನು ನೆನಪಿಸಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com