ಬೆಂಗಳೂರು: ಅವನು ಮತ್ತು ಶ್ರಾವಣಿ ಧಾರಾವಹಿಯಲ್ಲಿ ಅಭಿನಯಿಸುತ್ತಿದ್ದ ಕಿರುತೆರೆ ನಟಿ ಶೃತಿ ಮೃತದೇಹ ನೆಲಮಂಗಲ ಬಳಿಯ ಮಾದನಾಯಕನಹಳ್ಳಿಯಲ್ಲಿ ಪತ್ತೆಯಾಗಿದೆ.
ಕಳೆದ ರಾತ್ರಿ ಶೃತಿ ಅವರು ತಮ್ಮ ಮನೆಯಿಂದ ಸ್ನೇಹಿತರ ಜತೆ ಹೊರಗೆ ಹೋಗಿದ್ದು, ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಶೃತಿ ಸಾವು ಕುರಿತಂತೆ ಕುಟುಂಬವರ್ಗದವರು ಶೃತಿಯದ್ದು ಕೊಲೆ ಎಂದು ಆರೋಪಿಸಿದ್ದಾರೆ.
ಸ್ನೇಹಿತ ಶ್ರೀಕಾಂತ್ ಎಂಬುವರ ಜತೆ ಶೃತಿ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು. ನಂತರ ಶ್ರೀಕಾಂತ್ ಅವರ ಮನೆಗೆ ತೆರಳಿದ್ದರು. ಈ ಪಾರ್ಟಿಯಲ್ಲಿ ಶ್ರೀಕಾಂತ್ ಹಾಗೂ ಶೃತಿ ನಡುವೆ ಗಲಾಟೆಯಾಗಿದ್ದು, ನಂತರ ಆಕೆ ಶವವಾಗಿ ಪತ್ತೆಯಾಗಿದ್ದಾರೆ.
Advertisement