ಬಾಲಿವುಡ್ ಗೆ ಮತ್ತೆ ಜಿಗಿದ ಆರ್ ಜಿ ವಿ; ಸಿನೆಮಾ 'ಗೌರ್ನಮೆಂಟ್'

ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆ ಮಾಡಿದ್ದ ರಾಮ್ ಗೋಪಾಲ್ ವರ್ಮಾ ಅವರಿಗೆ ಈಗ ಮತ್ತೆ ಅದೃಷ್ಟ ಕುದುರಿದೆ.
ನಿರ್ದೇಶಕ ರಾಮ್ ಗೋಪಾಲ್ ವರ್ಮಾ
ನಿರ್ದೇಶಕ ರಾಮ್ ಗೋಪಾಲ್ ವರ್ಮಾ
Updated on

ಬೆಂಗಳೂರು: ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 'ಕಿಲ್ಲಿಂಗ್ ವೀರಪ್ಪನ್' ಬಿಡುಗಡೆ ಮಾಡಿದ್ದ ರಾಮ್ ಗೋಪಾಲ್ ವರ್ಮಾ ಅವರಿಗೆ ಈಗ ಮತ್ತೆ ಅದೃಷ್ಟ ಕುದುರಿದೆ. ಅವರು ಈಗ ಮತ್ತೆ ಬಾಲಿವುಡ್ ಗೆ ಹಿಂದಿರುಗಲಿದ್ದಾರಂತೆ.

ಮೂಲಗಳ ಪ್ರಕಾರ "ಅವರ 'ಕಂಪನಿ' ಸಿನೆಮಾದ ಎರಡನೇ ಭಾಗ ಎನ್ನಲಾಗಿದ್ದ ಸಿನೆಮಾಗೆ 'ಗೌರ್ನಮೆಂಟ್' ಎಂಬ ಶೀರ್ಷಿಕೆ ಇಡಲಾಗಿದೆ. ಇದು ಭೂಗತ ಲೋಕದ ಕಥೆಯಾಗಿದ್ದು ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್ ಕಥೆಯಂತೆ. ಇದಕ್ಕಾಗಿ ಸೂಕ್ತ ತಾರಾಗಣದ ಆಯ್ಕೆಯಲ್ಲಿದ್ದಾರೆ ನಿರ್ದೇಶಕ" ಎನ್ನಲಾಗಿದೆ.

ಬಾಲಿವುಡ್ ಗೆ ಹಿಂದಿರುಗಿರುವುದಲ್ಲದೆ, ಸುದೀಪ್ ಅವರು ನಾಯಕ ನಟನಾಗಿರುವ ಮುತ್ತಪ್ಪ ರೈ ಅವರ ಬಯೋಪಿಕ್ ಅನ್ನು ಕನ್ನಡ ಮತ್ತು ಹಿಂದಿಯಲ್ಲಿ ನಿರ್ದೇಶಿಸಲು ಕೂಡ ಮುಂದಾಗಿದ್ದು, ಮಾರ್ಚ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com