ಬೆಂಗಳೂರು: 'ಐರಾವತ' ಸಿನೆಮಾದ ನಂತರ ಮತ್ತೆ ಹೊಸ ಮುಖಗಳತ್ತ ಮುಖ ಮಾಡಿರುವ ಎ ಪಿ ಅರ್ಜುನ್ ಪ್ರೇಮ ಕಥೆ ಹೇಳಲು ಸಜ್ಜಾಗಿದ್ದಾರೆ. ಈ ರೊಮ್ಯಾಂಟಿಕ್ ಸಿನೆಮಾಗೆ 'ಕಿಸ್' ಎಂಬ ಶೀರ್ಷಿಕೆ ನೀಡಿದ್ದಾರೆ. ಪ್ರೇಮಿಗಳ ದಿನವಾದ ಫೆಬ್ರವರಿ ೧೪ ರಂದು ನಿರ್ದೇಶಕ ಸಿನೆಮಾದ ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನುತ್ತವೆ ಮೂಲಗಳು.
'ಐರಾವತ' ಸಿನೆಮಾ ಚಿತ್ರೀಕರಣದ ವೇಳೆ ನಟ ದರ್ಶನ್ ಜೊತೆಗೆ ಗುದ್ದಾಟಗಳು ನಡೆದು, ಚಿತ್ರೀಕರಣದ ಕೆಲವು ಭಾಗಗಳಿಂದ ನಿರ್ದೇಶಕರೇ ಹೊರಬಿದ್ದಿದ್ದ ಈ ಘಟನೆಯ ಹಿನ್ನಲೆಯಲ್ಲಿ ಅರ್ಜುನ್ ಮತ್ತೆ ಹೊಸಬರತ್ತ ಮುಖ ಮಾಡಿರುವುದು ವಿಶೇಷ.
ವಿ ರವಿ ಸಿನೆಮಾವನ್ನು ನಿರ್ಮಿಸುತ್ತಿದ್ದಾರೆ ಹರಿಕೃಷ್ಣ ಸಂಗೀತ ನಿರ್ದೇಶಕ. ಸಿನೆಮಾಗೆ ದೀಪು ಎಸ್ ಕುಮಾರ್ ಅವರ ಸಂಕಲನ. ರವಿವರ್ಮ ಅವರ ಸ್ಟಂಟ್ಸ್ ಮತ್ತು ಸತ್ಯ ಹೆಗಡೆ ಅವರ ಸಿನೆಮ್ಯಾಟೋಗ್ರಫಿ ಇದೆ.
Advertisement