ದುನಿಯಾ ಸೂರಿ ಹಾಗೂ ಸ್ಯಾಂಡಲ್ವುಡ್ ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ ಕಾಂಬಿನೇಷನ್ ಕಡ್ಡಿಪುಡಿ ಚಿತ್ರ ಹಿಟ್ ಆಗಿತ್ತು. ಇದೀಗ ಈ ಜೋಡಿ ಟಗರು ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದ್ದು ಈ ಚಿತ್ರಕ್ಕೆ ಕೆಂಡಸಂಪಿಗೆ ಚಿತ್ರದ ನಾಯಕಿ ಮಾನ್ವಿತಾ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ.
ಸೂರಿ ನಿರ್ದೇಶನದ ಕೆಂಡಸಂಪಿಗೆ ಚಿತ್ರ ಸೂಪರ್ ಹಿಟ್ ಆಗಿತ್ತು. ತಮ್ಮ ಮನೋಜ್ಞಾ ಅಭಿನಯದ ಮೂಲಕ ಮಾನ್ವಿತಾ ಹರೀಶ್ ಗುರುತಿಸಿಕೊಂಡಿದ್ದರು. ಹೀಗಾಗಿ ಸೂರಿ ತಮ್ಮ ಟಗರು ಚಿತ್ರಕ್ಕೆ ಮಾನ್ವಿತಾರನ್ನೇ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.
ಸದ್ಯ ಪುನೀತ್ ರಾಜ್ ಕುಮಾರ್ ಅಭಿನಯದ ದೊಡ್ಮನೆ ಹುಡ್ಗ ಚಿತ್ರದ ನಿರ್ದೇಶನದಲ್ಲಿ ಬ್ಯುಸಿಯಾಗಿರುವ ಸೂರಿ ದೊಡ್ಮನೆ ಹುಡ್ಗ ಚಿತ್ರದ ನಂತರ ಟಗರು ಚಿತ್ರವನ್ನು ಕೈಗೆತ್ತಿಕೊಳ್ಳಲಿದ್ದಾರೆ.
Advertisement