ವರ್ಜಿನಿಯಾ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್

ಅಮೆರಿಕಾದ ವರ್ಜಿನಿಯಾದಲ್ಲಿ 'ಯೋಗವಿಲ್ಲ' ಎಂದೇ ಹೆಸರಾದ ಸಚ್ಚಿದಾನಂದ ಆಶ್ರಮಕ್ಕೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಪುತ್ರಿ ಐಶ್ವರ್ಯ ಅವರೊಂದಿಗೆ ಭೇಟಿ ನೀಡಿದ್ದಾರೆ.
ವರ್ಜಿನಿಯಾ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಪುತ್ರಿ ಐಶ್ವರ್ಯ
ವರ್ಜಿನಿಯಾ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿದ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಪುತ್ರಿ ಐಶ್ವರ್ಯ
Updated on
ಚೆನ್ನೈ: ಅಮೆರಿಕಾದ ವರ್ಜಿನಿಯಾದಲ್ಲಿ 'ಯೋಗವಿಲ್ಲ' ಎಂದೇ ಹೆಸರಾದ ಸಚ್ಚಿದಾನಂದ ಆಶ್ರಮಕ್ಕೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಪುತ್ರಿ ಐಶ್ವರ್ಯ ಅವರೊಂದಿಗೆ ಭೇಟಿ ನೀಡಿದ್ದಾರೆ. 
ಈ ವಾರಾಂತ್ಯದಲ್ಲಿ ಅಲ್ಲಿಗೆ ಭೇಟಿ ನೀಡಿದ ನಂತರ ಟ್ವೀಟ್ ಮಾಡಿದ ಐಶ್ವರ್ಯ "ವರ್ಜಿನಿಯಾ 'ಯೋಗವಿಲ್ಲ'ದ ಮೂವತ್ತನೇ ವಾರ್ಷಿಕೋತ್ಸವದಲ್ಲಿ ಗುರು ಸಚ್ಚಿದಾನಂದರ ಚರಣಕಮಲದಲ್ಲಿ ಅಪ್ಪ ಮತ್ತು ನಾನು" ಎಂದು ಐಶ್ವರ್ಯ ಸೋಮವಾರ ಟ್ವೀಟ್ ಮಾಡಿದ್ದಾರೆ. 
ಒಂದು ತಿಂಗಳ ಹಿಂದೆಯೇ 65 ವರ್ಷದ ನಟ ಅಮೆರಿಕಾಗೆ ತೆರಳಿದ್ದರು. ಈ ವಾರದ ಕೊನೆಗೆ ಅವರು ಭಾರತಕ್ಕೆ ಹಿಂದಿರುಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
"ಈ ವಾರ ಅವರು ಹಿಂದಿರುಗಲಿದ್ದಾರೆ. ಅವರಿನ್ನೂ 'ಕಬಾಲಿ' ಸಿನೆಮಾದ ಅಂತಿಮ ಆವೃತ್ತಿ ವೀಕ್ಷಿಸಬೇಕಿದೆ" ಎಂದು ಮೂಲಗಳು ತಿಳಿಸಿವೆ. 
ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಸಿನೆಮಾ 'ಕಬಾಲಿ' ಈ ಶುಕ್ರವಾರ ತೆರೆ ಕಾಣಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com