ಹುಲಿ ಆನೆ ದತ್ತು ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್

ನಟ ದರ್ಶನ್ ಹಾಗೂ ಮೈಸೂರು ಮೃಗಾಲಯದ ಸಂಬಂಧ ಮತ್ತೆ ಮುಂದವರಿದಿದೆ. ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿನ ಆನೆ ಮತ್ತು ..
ದರ್ಶನ್
ದರ್ಶನ್

ಮೈಸೂರು: ನಟ ದರ್ಶನ್ ಹಾಗೂ ಮೈಸೂರು ಮೃಗಾಲಯದ ಸಂಬಂಧ ಮತ್ತೆ ಮುಂದವರಿದಿದೆ. ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿನ ಆನೆ ಮತ್ತು ಹುಲಿಯನ್ನು ನಟ ದರ್ಶನ್ ದತ್ತು ಪಡೆದಿದ್ದಾರೆ. ಕಳೆದ ವರ್ಷ ಆನೆ ಮರಿಯನ್ನು ದತ್ತು ಪಡೆದಿದ್ದ ಅವರು, ಪ್ರಸಕ್ತ ವರ್ಷ ಹುಲಿಯೊಂದನ್ನು ದತ್ತು ಪಡೆದಿದ್ದಾರೆ.

ಪ್ರಾಣಿ ಪ್ರಿಯರಾಗಿರುವ ದರ್ಶನ್ 1.75 ಲಕ್ಷ ರೂ ನೀಡಿ ಆನೆ ಮತ್ತು 1 ಲಕ್ಷ ರೂ. ನೀಡಿ ಹುಲಿಯನ್ನು ದತ್ತು ಪಡೆದುಕೊಂಡಿದ್ದಾರೆ. ದತ್ತು ಸ್ವೀಕಾರ ಪ್ರಮಾಣ ಪತ್ರವನ್ನು ದರ್ಶನ್ ಅವರಿಗೆ ರವಾನಿಸಲಾಗಿದೆ.

ದತ್ತು ಅವಧಿ 2017ರ ಜೂನ್ 20ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ಮೃಗಾಲಯ ಕಾರ್ಯ ನಿರ್ವಾಹಕ ನಿರ್ದೇಶಕ ವೆಂಕಟೇಶನ್ ಮಾಹಿತಿ ನೀಡಿದ್ದಾರೆ. ಇನ್ನೂ ಟಿ. ನರಸೀಪುರ ರಸ್ತೆಯಲ್ಲಿರುವ ತಮ್ಮ ಫಾರ್ಮ್ ನಲ್ಲಿ ದರ್ಶನ್ ಅಪರೂಪದ ಎಮು ಮತ್ತು ಆಸ್ಟ್ರೀಚ್ ಮತ್ತು ಕುದುರೆಗಳನ್ನು ಸಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com