ಕನಸು ನನಸಾಗಿದೆ; ಏಪ್ರಿಲ್ ಅಂತ್ಯಕ್ಕೆ ಸಿನೆಮಾ ರಾಷ್ಟ್ರದಾದ್ಯಂತ ಬಿಡುಗಡೆ: ತಿಥಿ ನಿರ್ದೇಶಕ

ತಮ್ಮ ಚೊಚ್ಚಲ ಚಿತ್ರ 'ತಿಥಿ' ಗೆ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ರಾಷ್ಟ್ರಪ್ರಶಸ್ತಿ ಗೆದ್ದಿರುವ ನಿರ್ದೇಶಕ ರಾಮ್ ರೆಡ್ಡಿ "ಕನಸು ನನಸಾಗಿದೆ" ಎಂದಿರುವುದಲ್ಲದೆ ಏಪ್ರಿಲ್ ಅಂತ್ಯಕ್ಕೆ ದೇಶದಾದ್ಯಂತ
'ತಿಥಿ' ಚಲನಚಿತ್ರದ ಸ್ಟಿಲ್
'ತಿಥಿ' ಚಲನಚಿತ್ರದ ಸ್ಟಿಲ್
Updated on

ಚೆನ್ನೈ: ತಮ್ಮ ಚೊಚ್ಚಲ ಚಿತ್ರ 'ತಿಥಿ' ಗೆ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ರಾಷ್ಟ್ರಪ್ರಶಸ್ತಿ ಗೆದ್ದಿರುವ ನಿರ್ದೇಶಕ ರಾಮ್ ರೆಡ್ಡಿ "ಕನಸು ನನಸಾಗಿದೆ" ಎಂದಿರುವುದಲ್ಲದೆ ಏಪ್ರಿಲ್ ಅಂತ್ಯಕ್ಕೆ ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಸಿನೆಮಾ ಬಿಡುಗಡೆಯಾಗಲಿದೆ ಎಂದಿದ್ದಾರೆ.

"ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಗಳಿಸಿದ ಮೇಲೆ, ಈಗ ರಾಷ್ಟ್ರೀಯ ಪ್ರಶಸ್ತಿ ಗೆದ್ದಿರುವುದು ಕನಸು ನನಸಾದಂತೆ" ಎಂದಿದ್ದಾರೆ ನಿರ್ದೇಶಕ ರಾಮ್

'ತಿಥಿ' ಲೊಕಾರ್ನೊ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಿನೆಮಾ ಪ್ರಶಸ್ತಿ ಗೆದ್ದಿತ್ತು. ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪ್ರಶಸ್ತಿ ಗಳಿಸಿತ್ತು.

"ಏಪ್ರಿಲ್ ಅಂತ್ಯಕ್ಕೆ ಅಥವಾ ಮೇ ಮೊದಲ ವಾರದಲ್ಲಿ ಸಿನೆಮಾ ಬಿಡುಗಡೆಯಾಗಲಿದ್ದು, ರಾಣಾ ದಗ್ಗುಬಟ್ಟಿ ಅಂತಹವರ ಬೆಂಬಲದೊಂದಿಗೆ ಕರ್ನಾಟಕ ಮತ್ತು ರಾಷ್ಟ್ರದಾದ್ಯಂತ ಹೆಚ್ಚೆಚ್ಚು ಪ್ರೇಕ್ಷಕರನ್ನು 'ತಿಥಿ' ಸಿನೆಮಾ ಸೆಳೆಯಲಿದೆ ಎಂದು ನಂಬಿದ್ದೇನೆ" ಎನ್ನುತ್ತಾರೆ ರಾಮ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com