ನವೆಂಬರ್ ೧೮ ರಿಂದ ಸೂರಿ ನಿರ್ದೇಶನದ, ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರೀಕರಣ ಪ್ರಾರಂಭಿಸಬೇಕಿದೆ. ಇದಕ್ಕಾಗಿ ನಿರ್ಮಾಪಕ ಕೆಪಿ ಶ್ರೀಕಾಂತ್ ಯೋಜನೆಯನ್ನು ಹಾಕಿಕೊಂಡಿದ್ದಾರೆ. "ನಾವು ಎಲ್ಲ ವಿಭಾಗದ ಮುಖ್ಯಸ್ಥರಿಗೆ ಚೆಕ್ ಗಳನ್ನೂ ನೀಡುತ್ತಿದ್ದೇವೆ, ನಾವು ಸಾಮಾನ್ಯವಾಗಿ, ನಿರ್ಮಾಣ ತಂಡ, ಊಟ-ತಿಂಡಿ ವ್ಯವಸ್ಥೆ ಮಾಡುವವರಿಗೆ, ಮೇಕಪ್ ನವರಿಗೆ ಪ್ರತಿ ದಿನ ಹಣ ಪಾವತಿಸುತ್ತೇವೆ, ಆದರೆ ಈಗ ಪ್ರತಿ ವಾರ ಹಣ ನೀಡುವ ಒಪ್ಪಂದವಾಗಿದೆ. ಆ ವಿಭಾಗದಲ್ಲಿನ ಮುಖ್ಯಸ್ಥರಿಗೆ ಇದಕ್ಕಾಗಿ ಮನವಿ ಮಾಡಿದ್ದೇವೆ. ನಾವು ಕಾನೂನು ಬದಲಿಸಲು ಸಾಧ್ಯವಿಲ್ಲ, ಅದಕ್ಕೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಚಿತ್ರರಂಗ ಸಹಜಸ್ಥಿತಿಗೆ ಬರಲು ನಾಲ್ಕು ತಿಂಗಳುಗಳಾದರೂ ಬೇಕು, ಆದರೂ ನಾವು ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ" ಎನ್ನುತ್ತಾರೆ ಶ್ರೀಕಾಂತ್.