'ಬಿಗ್' ಮನೆಯಲ್ಲಿ ಪ್ರಥಮ್ ಮೇಲೆ ಹಲ್ಲೆ: ಹುಚ್ಚ ವೆಂಕಟ್ ವಿರುದ್ಧ ಸಮರ ಸಾರಿದ ಸುದೀಪ್

ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ಹುಚ್ಚ ವೆಂಕಟ್ ಅವರು ಪ್ರಥಮ್ ಮೇಲೆ ಹಲ್ಲೆ ನಡೆಸಿರುವುದನ್ನು ನಟ ಹಾಗೂ ನಿರೂಪಕ ಕಿಚ್ಚ ಸುದೀಪ್ ಅವರು ಖಂಡಿಸಿದ್ದು, ಹುಚ್ಚ ವೆಂಕಟ್ ಅವರಿಗೆ ಶಿಕ್ಷೆಯಾದ ನಂತರವಷ್ಟೇ ಕಾರ್ಯಕ್ರಮದ ನಿರೂಪಣೆಯನ್ನು...
'ಬಿಗ್' ಮನೆಯಲ್ಲಿ ಪ್ರಥಮ್ ಮೇಲೆ ಹಲ್ಲೆ: ಹುಚ್ಚ ವೆಂಕಟ್ ವಿರುದ್ಧ ಸಮರ ಸಾರಿದ ಸುದೀಪ್
'ಬಿಗ್' ಮನೆಯಲ್ಲಿ ಪ್ರಥಮ್ ಮೇಲೆ ಹಲ್ಲೆ: ಹುಚ್ಚ ವೆಂಕಟ್ ವಿರುದ್ಧ ಸಮರ ಸಾರಿದ ಸುದೀಪ್

ಬೆಂಗಳೂರು: ಅತಿಥಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ಹುಚ್ಚ ವೆಂಕಟ್ ಅವರು ಪ್ರಥಮ್ ಮೇಲೆ ಹಲ್ಲೆ ನಡೆಸಿರುವುದನ್ನು ನಟ ಹಾಗೂ ನಿರೂಪಕ ಕಿಚ್ಚ ಸುದೀಪ್ ಅವರು ಖಂಡಿಸಿದ್ದು, ಹುಚ್ಚ ವೆಂಕಟ್ ಅವರಿಗೆ ಶಿಕ್ಷೆಯಾದ ನಂತರವಷ್ಟೇ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತೇನೆಂದು ಹೇಳಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ಹೇಳಿಕೊಂಡಿರುವ ಅವರು, ಈಗಷ್ಟೇ ಕಾರ್ಯಕ್ರಮವನ್ನು ನೋಡಿದೆ. ಹುಚ್ಚ ವೆಂಕಟ್ ಅವರು ಮತ್ತೆ ಸ್ಪರ್ಧಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ. ಹುಚ್ಚ ವೆಂಕಟ್ ಅವರು ಮಾಡಿರುವುದು ಅಕ್ಷಮ್ಯ ತಪ್ಪು. ನಾನು ಖಂಡಿತವಾಗಿಯೂ ನ್ಯಾಯದ ಪರವಾಗಿ ನಿಲ್ಲುತ್ತೇನೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com