ಬೆಂಗಳೂರು: ನೃತ್ಯನಿರ್ದೇಶಕ-ನಿರ್ದೇಶಕ ಹರ್ಷ ಕನ್ನಡ ಚಿತ್ರರಂಗದ ಪ್ರಮುಖ ನಟರೊಂದಿಗೆ ಈಗಾಗಲೇ ಕೆಲಸ ಮಾಡಿರುವವರು. 'ಚಿಂಗಾರಿ', 'ಭಜರಂಗಿ', 'ವಜ್ರಕಾಯ' ಮತ್ತು 'ಜೈ ಮಾರುತಿ ೮೦೦' ಸಿನೆಮಾಗಳ ಮೂಲಕ ದರ್ಶನ್, ಶಿವರಾಜ್ ಕುಮಾರ್ ಮತ್ತು ಶರಣ್ ಅವರುಗಳನ್ನು ನಿರ್ದೇಶಿಸಿದ್ದಾರೆ. ಪುನೀತ್ ರಾಜಕುಮಾರ್ ನಟನೆಯ ಸಿನೆಮಾ ನಿರ್ದೇಶಿಸುವ ಅವರ ಬಹುದಿನದ ಕನಸು ಈಗ ನನಸಾಗಿದೆ.