ಚೊಚ್ಚಲ ನಿರ್ದೇಶಕ ಶಂಕರ್ ಈ ಹಿಂದೆ ನಿರ್ದೇಶಕ ಪವನ್ ಒಡೆಯರ್ ಅವರೊಂದಿಗೆ 'ರಣ ವಿಕ್ರಮ', 'ಜೆಸ್ಸಿ' ಮತ್ತು ಇನ್ನು ಬಿಡುಗಡೆಯಾಗಬೇಕಿರುವ 'ನಟರಾಜ ಸರ್ವಿಸ್' ಸಿನೆಮಾಗಳಲ್ಲಿ ಸಹನಿರ್ದೇಶಕನಾಗಿ ದುಡಿದಿದ್ದಾರೆ. ಈಗ ಸ್ವತಂತ್ರ ಸಿನೆಮಾ ಮಾಡಲು ಮುಂದಾಗಿರುವ ಶಂಕರ್ ತಮ್ಮ ಹೊಸ ಚಿತ್ರಕ್ಕೆ ಹಲವು ಆಸಕ್ತಿದಾಯಕ ಶೀರ್ಷಿಕೆಗಳನ್ನು ಹೊಂದಿದ್ದು, 'ಎಂಟಿವಿ ಸುಬ್ಬುಲಕ್ಷ್ಮಿಗೆ' ಅಂತಿಮವಾಗುವ ಸಾಧ್ಯತೆಯಿದೆ.