ಬೆಂಗಳೂರು: ಸುಮಾರು ಆರು ವರ್ಷಗಳ ಹಿಂದೆ ಹೃದಯ 'ಒರಟ ಐ ಲವ್ ಯು' ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ನಂತರ ಸ್ವಯಂಪ್ರೇರಿತವಾಗಿ ನಟನೆಯಿಂದ ದೂರವುಳಿದಿದ್ದವರು. ಆ ಸಿನೆಮಾದ ನಿರ್ಮಾಪಕರು ಚಿತ್ರರಂಗಕ್ಕೆ ಅವರನ್ನು 'ಸೌಮ್ಯ' ಎಂದು ಪರಿಚಯಿಸಿದ್ದರು. ಈ ನಿರ್ದೇಶಕ ಶಿವ ಗಣೇಶ ಅವರ 'ತ್ರಾತಕ' ಸಿನೆಮಾದ ಮೂಲಕ ತಮ್ಮ ನಟನೆಯ ಮರುಪ್ರಯಾಣವನ್ನು ಪ್ರಾರಂಭಿಸಲು ನಟಿ ಸಿದ್ಧರಾಗಿದ್ದಾರೆ. ಇದು ತನಿಖಾ ಥ್ರಿಲ್ಲರ್ ಅಂತೆ!