ಚಿತ್ರ ವಿಮರ್ಶೆಯಲ್ಲಿ ನೋವುಂಟಾಗುವಂತಹ ಅಭಿಪ್ರಾಯ ಹೇಳಬೇಡಿ: ರಜನಿ ಕಾಂತ್

ಯಾರಿಗೂ ನೋವಾಗದಂತೆ ಸಿನಿಮಾ ವಿಮರ್ಶೆ ಮಾಡಿ ಎಂದು ಸೂಪರ್ ಸ್ಟಾರ್ ರಜನಿ ಕಾಂತ್ ಮನವಿ ಮಾಡಿದ್ದಾರೆ...
ರಜನಿಕಾಂತ್
ರಜನಿಕಾಂತ್
Updated on
ಚೆನ್ನೈ: ಯಾರಿಗೂ ನೋವಾಗದಂತೆ ಸಿನಿಮಾ ವಿಮರ್ಶೆ ಮಾಡಿ ಎಂದು ಸೂಪರ್ ಸ್ಟಾರ್ ರಜನೀಕಾಂತ್ ಮನವಿ ಮಾಡಿದ್ದಾರೆ.
ಶಿವಾಜಿ ಗಣೇಶನ್ ಅವರ ನಿವಾಸದಲ್ಲಿ ನೆರುಪ್ಪು ಡಾ ಸಿನಿಮಾ ಆಡಿಯೋ ಬಿಡುಗಡೆ ವೇಳೆ ಮಾತನಾಡಿದ ರಜನಿಕಾಂತ್, ಸಿನಿಮಾ ಮಾಡುವುದು ನಮ್ಮ ಜವಾಬ್ದಾರಿ, ವಿಮರ್ಶೆ ಮಾಡುವುದು ನಿಮ್ಮ ಕರ್ತವ್ಯ. ಆದರೆ ನೀವು ಸಿನಿಮಾ ವಿಮರ್ಶೆ ಮಾಡುವಾಗ ಹೇಗೆ ಸಂಹವನ ಮಾಡುತ್ತೀರಾ ಎಂಬುದು ಮುಖ್ಯವಾಗಿದೆ. ಯಾರಿಗೂ ನೋವಾಗುವಂತ ಅಭಿಪ್ರಾಯಗಳನ್ನು ನೀಡಬೇಡಿ. ಸಿನಿಮಾ ಬಗ್ಗೆ ನಿಮ್ಮ ಯೋಚನೆಗಳನ್ನು ಸರಿಯಾದ ಪದಗಳಿಂದ ವಿಮರ್ಶಿಸಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ನಟ ವಿಶಾಲ್ ವಿಮರ್ಶೆ ಮಾಡುವುದು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ನಮಗೆ ತಿಳಿದಿದೆ, ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ಹೇಳಲು ಅವಕಾಶವಿದೆ, ಆದರೆ ಸಿನಿಮಾಗಳಿಗೆ ಉಸಿರಾಡಲು ಅವಕಾಶ ನೀಡಿ, ಸಿನಿಮಾ ಬಿಡುಗಡೆಯಾದ 4 ನೇ ದಿನ ಚಿತ್ರ ವಿಮರ್ಶೆ ಮಾಡಿ ಎಂದು ವಿಶಾಲ್ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com