೨೦೧೨ರಲ್ಲಿ ನಟನೆಗೆ ಪಾದಾರ್ಪಣೆ ಮಾಡಿದ್ದ ಅರವಿಂದ್ ಅಯ್ಯರ್ ಈಗ ನಾಲ್ಕು ವರ್ಷಗಳ ನಂತರ ನಾಯಕನಟರಾಗಿಟ್ಟಿದ್ದಾರೆ. ಹೇಮಂತ್ ರಾವ್ ಅವರ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾದ ಆಡಿಷನ್ ನಲ್ಲಿ ಭಾಗಿಯಾಗಿದ್ದರು, ಆಯ್ಕೆಯಾಗಿರಲಿಲ್ಲ. "ಈಗ ನನ್ನ ಕಾಯುವಿಕೆ ಫಲ ನೀಡಿದೆ. ಸದ್ಯಕ್ಕೆ ಪುಷ್ಕರ್ ಫಿಲಂಸ್ ಮತ್ತು ಹೇಮಂತ್ ರಾವ್ ಸಹ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದೇನೆ" ಎಂದಿದ್ದಾರೆ ಅರವಿಂದ್.