ಬೆಂಗಳೂರು: 'ಮಾಸ್ತಿ ಗುಡಿ' ಸಿನೆಮಾದ ಬಿಡುಗಡೆಗೆ ಕಾಯುತ್ತಿರುವ ನಿರ್ದೇಶಕ ನಾಗಶೇಖರ್, ಸದ್ದಿಲ್ಲದೇ ಮತ್ತೊಂದು ಐತಿಹಾಸಿಕ ಡ್ರಾಮಾ ಸ್ಕ್ರಿಪ್ಟ್ ಮೇಲೆ ಕೆಲಸ ಮಾಡುತ್ತಿದ್ದಾರೆ. 'ಶಾಂತಲಾ ವಿಷ್ಣುವರ್ಧನ' ಎಂಬ ಶೀರ್ಷಿಕೆಯನ್ನು ನೊಂದಾಯಿಸಿರುವ ನಾಗಶೇಖರ್ ಕಳೆದ ಆರು ತಿಂಗಳುಗಳಿಂದ ಇದರ ಮೇಲೆ ಕೆಲಸ ಮಾಡುತ್ತಿದ್ದಾರಂತೆ. ಇದನ್ನು ಅಂತಿಮಗೊಳಿಸಲು ಇನ್ನು ಆರು ತಿಂಗಳು ಹಿಡಿಯುತ್ತದಂತೆ.