ಇತ್ತ ಎಸ್ ಎಸ್ ರಾಜಮೌಳಿ ಇದರ ಬಗ್ಗೆ ಉತ್ಸಾಹ ತೋರಿದ್ದು ಅವರು ಅಮಿರ್ ಖಾನ್ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂಬ ವರದಿಯ ಜೊತೆಗೆ, ಅತ್ತ ದುಬೈ ಮೂಲದ ಕನ್ನಡ ಉದ್ಯಮಿ ಬಿ ಆರ್ ಶೆಟ್ಟಿ ಮಹಾಭಾರತ ನಿರ್ಮಾಣಕ್ಕೆ ೧೦೦೦ ಕೋಟಿ ರೂ ಹೂಡುತ್ತಿದ್ದಾರೆ ಎಂದು ನೆನ್ನೆಯಷ್ಟೇ ವರದಿಯಾಗಿದೆ. ಮೋಹನ್ ಲಾಲ್ ನಟಿಸಲಿರುವ ಈ ಚಿತ್ರದಲ್ಲಿ ಭಾರತ ಮತ್ತು ವಿದೇಶಿ ನಟರು ಮತ್ತು ತಂತ್ರಜ್ಞರು ಕೆಲಸ ಮಾಡಲಿದ್ದು, ವಿ ಎ ಶ್ರೀಕುಮಾರ್ ಮೆನನ್ ನಿರ್ದೇಶಿಸಲಿದ್ದಾರೆ. ಇದು ಕನ್ನಡವೂ ಸೇರಿದಂತೆ ೬ ಭಾಷೆಗಳಲ್ಲಿ ಪ್ರಾಥಮಿಕವಾಗಿ ಮೂಡಿಬರಲಿದ್ದು, ಹಲವು ಭಾಷೆಗಳಿಗೆ ಡಬ್ ಆಗಲಿದೆಯಂತೆ. ಇತ್ತ ಕನ್ನಡ ಚಿತ್ರರಂಗವೂ ಹಿಂದೆ ಬಿದ್ದಿಲ್ಲ. ದರ್ಶನ್ ಅವರ ೫೦ ಚಿತ್ರವಾಗಿ 'ಕುರುಕ್ಷೇತ್ರ' ಮೂಡಿ ಬರಲಿದೆ.