ಬೆಂಗಳೂರು: ನಟನೆಗೆ ಭಾಷೆಯ ಹಂಗಿಲ್ಲ. ಕನ್ನಡ ಮತ್ತು ಮಲಯಾಳಂ ಭಾಷೆಗಳ ಸಿನೆಮಾಗಳಿಂದ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಶ್ರದ್ಧಾ ಶ್ರೀನಾಥ್, ಮಣಿರತ್ನಂ ನಿರ್ದೇಶನದ 'ಕಾಟ್ರು ವೇಳಿಯಿದೈ' ತಮಿಳು ಸಿನೆಮಾದಲ್ಲಿ ಕೂಡ ನಟಿಸಿದ್ದರು. ಅಲ್ಲದೆ ಮತ್ತೆರಡು ತಮಿಳು ಸಿನೆಮಾಗಳಾದ 'ಇವನ್ ತಂತಿರನ್' ಮತ್ತು 'ವಿಕ್ರಂ ವೇಧ' ಕೂಡ ಅವರ ಕೈನಲ್ಲಿವೆ. ಈಗ ತೆಲುಗು ಚಿತ್ರರಂಗದಲ್ಲಿ ಕೂಡ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.