ಚೆನ್ನೈ: ವೇತನ ಪರಿಷ್ಕರಣೆಗೆ ಒತ್ತಾಯಿಸಿ ಕಳೆದ ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ದಕ್ಷಿಣ ಭಾರತದ ಚಿತ್ರೋದ್ಯಮ ನೌಕರರ ಒಕ್ಕೂಟ(ಎಫ್ಇಎಫ್ ಎಶ್ ಐ) ಗುರುವಾರ ಮುಷ್ಕರ ಹಿಂಪಡೆದಿದ್ದು, ನಾಳೆಯಿಂದ ಕೆಲಸಕ್ಕೆ ಮರಳುವುದಾಗಿ ಘೋಷಿಸಿದೆ.
ಹಿರಿಯ ನಟರಾದ ರಜನಿಕಾಂತ್, ಕಮಲ್ ಹಾಸನ್, ಚಿತ್ರ ನಿರ್ಮಾಪಕರು, ನಿರ್ದೇಶಕರು ಹಾಗೂ ಚಿತ್ರೋದ್ಯಮದ ಇತರೆ ಗಣ್ಯರ ಸಲಹೆ ಮೇರೆಗೆ ಪ್ರತಿಭಟನೆಯನ್ನು ಹಿಂಪಡೆಯಲಾಗಿದೆ ಎಂದು ಎಫ್ ಇಎಫ್ ಎಸ್ ಐ ಅಧ್ಯಕ್ಷ ಆರ್ ಕೆ ಸೆಲ್ವಮಣಿ ಅವರು ಹೇಳಿದ್ದಾರೆ.
ತಮಿಳು ಚಿತ್ರೋದ್ಯಮದ ನೌಕರರ ಸಮಸ್ಯೆ ಪರಿಹರಿಸುವುದಕ್ಕಾಗಿ ಚಿತ್ರ ನಿರ್ಮಾಪಕರ ಪರಿಷತ್ ನೊಂದಿಗೆ ಚರ್ಚಿಸುವುದಾಗಿ ತಮಿಳುನಾಡು ಸರ್ಕಾರ ಭರವಸೆ ನೀಡಿದೆ ಎಂದು ಅವರು ತಿಳಿಸಿದ್ದಾರೆ.