ಕನ್ನಡದ ಹಿರಿಯ ಕಲಾವಿದ 'ಮುಕ್ತ ಮುಕ್ತ' ಖ್ಯಾತಿಯ ಗುರುಮೂರ್ತಿ ವಿಧಿವಶ

ರಂಗಭೂಮಿ ಕಲಾವಿದ, ಕನ್ನಡದ ಹಿರಿಯ ನಟ ಗುರುಮೂರ್ತಿ ಅವರು ತೀವ್ರ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ...
ಗುರುಮೂರ್ತಿ
ಗುರುಮೂರ್ತಿ
ರಂಗಭೂಮಿ ಕಲಾವಿದ, ಕನ್ನಡದ ಹಿರಿಯ ನಟ ಗುರುಮೂರ್ತಿ ಅವರು ತೀವ್ರ ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ. 
ನಗರದ ಕನಕಪುರ ರಸ್ತೆಯ ಅವರ ನಿವಾಸದಲ್ಲಿ ನಿನ್ನೆ ಸಂಜೆ ಅವರಿಗೆ ತೀವ್ರ ಹೃದಯಾಘಾತವಾಗಿದ್ದು ಕೂಡಲೇ ಅವರನ್ನು ರಾಜಶೇಖರ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. 
ದೂರದರ್ಶನದಲ್ಲಿ ಬರುತ್ತಿದ್ದ ಅಡಚಣೆಗಾಗಿ ಕ್ಷಮಿಸಿ ಧಾರವಾಹಿಯಿಂದ ಸಾಕಷ್ಟು ಖ್ಯಾತಿ ಗಳಿಸಿದ್ದ ಗುರುಮೂರ್ತಿ ಅವರು ನಂತರ ಮುಕ್ತ-ಮುಕ್ತ ಧಾರವಾಹಿಯಲ್ಲಿ ಅಭಿನಯಿಸಿದ್ದರು, 
ಜಗ್ಗುದಾದ, ಕನ್ನಡದ ಕಂಠಿ ಸೇರಿದಂತೆ 12ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗುರುಮೂರ್ತಿ ಅವರು ಪತ್ನಿ ಪೂರ್ಣಿಮಾ, ಮಕ್ಕಳಾದ ಜಯಂತ್, ನಿಶಾಂತ್ ಅವರನ್ನು ಅಗಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com