ಕಲಾವಿದನಾಗಿ ನಾನು ಸಮಾಜದಲ್ಲಿ ನಡೆಯುವ ಸಂಗತಿಗಳಿಗೆ ಪ್ರತಿಕ್ರಿಯಿಸುವುದು ಮತ್ತು ಮಾತನಾಡುವುದು ನನ್ನ ಜವಾಬ್ದಾರಿ. ಸಮಾಜದ ಜನರಿಂದ ಸಿಕ್ಕಿದ ಪ್ರೀತಿ, ವಿಶ್ವಾಸಗಳಿಂದ ಕಾಲಾವಿದರು ಮತ್ತು ಕ್ರಿಯಾಶೀಲ ಸಮುದಾಯದವರು ಕೆಲಸ ಮಾಡುತ್ತಾರೆ. ಅದಕ್ಕೆ ತಕ್ಕಂತೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವುದು ಕಲಾವಿದರ ಕರ್ತವ್ಯ. ನಾವು ಹೇಡಿಗಳಾದರೆ ಸಮಾಜವನ್ನು ಹೇಡಿಗಳಾಗಿ ಮಾಡಿದ್ದಕ್ಕೆ ನಾವು ಕಾರಣರಾಗುತ್ತೇವೆ. ನನಗೆ ಬೆದರಿಕೆ ಹಾಕಿದವರ ಬಗ್ಗೆ ನನಗೆ ನಗು ಬರುತ್ತದೆ ಎಂದರು.