ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಗೆ ಇಂದು 67ನೇ ಜನ್ಮ ದಿನದ ಸಂಭ್ರಮ. ಆದರೆ ಅಭಿಮಾನಿಗಳ ಪಾಲಿನ ಆರಾದ್ಯ ದೈವವಾದ ನಟ ರಜನಿಕಾಂತ್ ಈ ಬಾರಿ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಳ್ಳದೆ ಇರಲು ತೀರ್ಮಾನಿಸಿದ್ದಾರೆ.
ತಮಿಳುನಾಡಿಗೆ ಇತ್ತೀಚೆಗೆ ಅಪ್ಪಳಿಸಿದ ಓಖಿ ಚಂಡಮಾರುತದ ಕಾರಣ ಬಹಳಷ್ಟು ಹಾನಿಯಾಗಿದೆ. ಇದರಿಂದ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ರಾಜ್ಯದಲ್ಲಿನ ಈ ಕಠಿಣ ಸಂದರ್ಭದ ಕಾರಣ ನಟ ತಾನು ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಳ್ಳದೆ ಇರಲು ತೀರ್ಮಾನಿಸಿದ್ದಾರೆ.
ಕಳೆದ ಬಾರಿ ಚೆನ್ನೈ ಪ್ರವಾಹ ಹಾಗೂ ಜಯಲಲಿತಾ ಅವರ ಸಾವಿನ ಕಾರಣದಿಂದ ರಜನಿ ಹುಟ್ಟು ಹಬ್ಬ ಆಚರಣೆಯಿಂದ ದೂರ ಸರಿದಿದ್ದು ಈ ಬಾರಿ ಓಖಿ ಚಂಡಮಾರುತದ ಹಾವಳಿ ಕಾರಣ ಅಭಿಮಾನಿಗಳಿಗೆ ಮತ್ತೆ ನಿರಾಶೆಯುಂಟುಮಾಡಿದ್ದಾರೆ.
ರಜನಿಕಾಂತ್ ಸದ್ಯ ಶಂಕರ್ ಅವರ 2.0 ಹಾಗೂ ಪಾ ರಂಜಿತ್ ಅವರ ಕಾಲ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜನುಮ ದಿನವಾದ ಇಂದು ರಜನಿ ಆಪ್ತೇಷ್ಟರ ಜತೆ ಕೆಲ ಸಮಯ ಕಳೆಯಲಿದ್ದಾರೆ.