ಬೆಂಗಳೂರು: ವಿಷಯ ಪ್ರಶಸ್ತವಾಗಿದ್ದರೆ ವಿವಿಧ ನಿರ್ದೇಶಕರ ಜೊತೆಗೆ, ವಿವಿಧ ಬಗೆಯ ಸಿನೆಮಾಗಳ ಜೊತೆಗೆ ಪ್ರಯೋಗ ಮಾಡುವುದಕ್ಕೆ ನಟ ಶಿವರಾಜ್ ಕುಮಾರ್ ಎಂದಿಗೂ ಸಿದ್ಧ. ಸದ್ಯಕ್ಕೆ ಕೈತುಂಬಾ ಕೆಲಸ ಇದ್ದು ಬ್ಯುಸಿಯಾಗಿರುವ ನಟ, ಕೆ ಮಂಜು ನಿರ್ಮಾಣದ, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಸಿನೆಮಾದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ. ನಾಗತಿಹಳ್ಳಿಯವರ ಜೊತೆಗೆ ಶಿವಣ್ಣನವರ ಮೊದಲ ಸಿನೆಮಾ ಇದಾಗಲಿದೆ.