ಕನ್ನಡದ ಸೊಗಡಿಗೆ ತಕ್ಕಂತೆ ಇಲ್ಲಿ ಕೂಡ ಅಜಯ್-ಅತುಲ್ ತಮ್ಮ ಕಾರ್ಯಕ್ಕೆ ನ್ಯಾಯ ಒದಗಿಸಿದ್ದಾರೆ. ರಿಮೇಕ್ ಚಿತ್ರವಾದ ಕಾರಣ ಇಲ್ಲಿ ಹೋಲಿಕೆ ಖಂಡಿತಾ ನಡೆಯುತ್ತದೆ. ಅದೃಷ್ಟವೋ, ದುರಾದೃಷ್ಟವೋ ಬೆಂಗಳೂರಿಗರು ಅನೇಕ ಭಾಷೆಗಳ ಅನೇಕ ಚಿತ್ರಗಳನ್ನು ನೋಡಿರಬಹುದು. ಹಾಗಾಗಿ ಸೈರಾಟ್ ನ ರಿಮೇಕ್ ಮಾಡುವಾಗ ನಮಗೆ ಸವಾಲು ಮತ್ತು ಜವಾಬ್ದಾರಿ ಹೆಚ್ಚಿತ್ತು. ಮನಸು ಮಲ್ಲಿಗೆ ಚಿತ್ರದ ಸಂಗೀತ ಕೂಡ ಅದ್ಭುತವಾಗಿದ್ದು ಸೈರಾಟ್ ಗೆ ಸಮನಾಗಿ ಬಂದಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಎಸ್.ನಾರಾಯಣ್.