21 ವರ್ಷಗಳನ್ನು ಚಿತ್ರರಂಗದಲ್ಲಿ ಕಳೆದ ಕನ್ನಡದ ಖ್ಯಾತ ನಟ ಸುದೀಪ್, ಸಿನಿಮಾ ಭರವಸೆಯ ಮೇಲೆ ಓಡುತ್ತದೆ ಎಂದು ಹೇಳುತ್ತಾರೆ. ಸಂತೋಷದ ಜೀವನ ನಡೆಸಲು ಈ ನಟ ಹೇಳುವ ಮಂತ್ರ ' ಈ ದಿನವನ್ನು ಸಂತೋಷವಾಗಿ ಕಳೆಯಿರಿ, ತುಂಬಾ ಯೋಚಿಸಬೇಡಿ' ಎನ್ನುತ್ತಾರೆ. ತಮ್ಮ ಮನೆಯಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಚಿತ್ರ ಜಗತ್ತಿನ ಬಗ್ಗೆ ತಮ್ಮ ಯೋಚನೆಗಳು ಮತ್ತು ಮುಂದಿನ ಬಹು ನಿರೀಕ್ಷಿತ ಚಿತ್ರ ಹೆಬ್ಬುಲಿಯ ಬಗ್ಗೆ ಅನುಭವ ಹಂಚಿಕೊಂಡರು.