ಮತ್ತೆ ಕೆಲಸ ಪ್ರಾರಂಭಿಸಿದ ಅಪಹರಣಕ್ಕೀಡಾಗಿದ್ದ ಮಲಯಾಳಂ ನಟಿ

ಎರಡು ಘಂಟೆಗಳ ಕಾಲ ಅಪಹರಣ ಪ್ರಹಸನದಲ್ಲಿ ಸಿಲುಕಿ ಬಿಡಿಸಿಕೊಂಡಿದ್ದ ಜನಪ್ರಿಯ ಮಲಯಾಳಂ ನಟಿ ಶನಿವಾರ ಮತ್ತೆ ಅವರ ನೂತನ ಸಿನೆಮಾ 'ಆಡಮ್' ಚಿತ್ರೀಕರಣದಲ್ಲಿ ಭಾಗಿಯಾಗದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಕೊಚ್ಚಿ: ಎರಡು ಘಂಟೆಗಳ ಕಾಲ ಅಪಹರಣ ಪ್ರಹಸನದಲ್ಲಿ ಸಿಲುಕಿ ಬಿಡಿಸಿಕೊಂಡಿದ್ದ ಜನಪ್ರಿಯ ಮಲಯಾಳಂ ನಟಿ ಶನಿವಾರ ಮತ್ತೆ ಅವರ ನೂತನ ಸಿನೆಮಾ 'ಆಡಮ್' ಚಿತ್ರೀಕರಣದಲ್ಲಿ ಭಾಗಿಯಾಗದ್ದಾರೆ. ಇದನ್ನು ಅವರ ಸಹನಟ ಪೃಥ್ವಿರಾಜ್ ಧೃಢೀಕರಿಸಿದ್ದಾರೆ. 
ನಟ ಈ ನಿರ್ಧಾರವನ್ನು 'ಅದ್ಭುತ' ಎಂದು ಕರೆದಿದ್ದಾರೆ. ನಟಿ ಹೊಸ ಸಿನೆಮಾದ ಪೂಜೆಯಲ್ಲಿ ಭಾಗಿಯಾಗಿದ್ದಾರೆ, 
"ಇಂದು (ಶನಿವಾರ) ನನ್ನ ಆತ್ಮೀಯ ಗೆಳತಿ ಸೆಟ್ ಗೆ ಬಂದಿದ್ದಾರೆ... ನನ್ನ ಜೀವನದ ಈ ಅದ್ಭುತ ಮಹಿಳೆಯ ಅದ್ಭುತ ಧೈರ್ಯವನ್ನು ಕಣ್ಣಾರೆ ಕಾಣುತ್ತಿದ್ದೇನೆ" ಎಂದು ಪೃಥ್ವಿರಾಜ್ ಫೇಸ್ಬುಕ್ ನಲ್ಲಿ ಬರೆದಿದ್ದಾರೆ. 
"ಇಂದು ಅವರು ಧೈರ್ಯವಾದ ಹೇಳಿಕೆ ನೀಡಿದ್ದಾರೆ.. ಇದು ಮುಂದಿನ ದಿನಗಳಲ್ಲಿ, ಹಲವು ಪ್ರದೇಶಗಳಲ್ಲಿ, ಲಿಂಗಗಳ ನಡುವೆ ಪ್ರತಿಧ್ವನಿಸಲಿದೆ- ಯಾವುದೇ ಘಟನೆ ನಿಮ್ಮ ಜೀವನವನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಅದನ್ನು ನೀವೇ ನಿಯಂತ್ರಿಸಬೇಕೆಂದು" 
"ವಿಶ್ವದಾದ್ಯಂತ ಈ ಹೇಳಿಕೆ ಇನ್ನು ಮುಂದೆ ಕೌನ್ಸಲ್ಲಿಂಗ್ ಗಳಲ್ಲಿ ಬಳಕೆಯಾಗಲಿದೆ. ನನ್ನ ಗೆಳತಿ ಮಾಡುತ್ತಿರುವ ಈ ಹೇಳಿಕೆ ಕೇಳದ ಲಕ್ಷಾಂತರ ಜನರ ಧ್ವನಿಯಾಗಲಿದೆ" ಎಂದು ಕೂಡ ಅವರು ಬರೆದಿದ್ದಾರೆ. 
ನಂತರ ಹೆಣ್ಣುಗಳನ್ನು ಕೀಳಾಗಿ ಚಿತ್ರಿಸುವ ಸಿನೆಮಾಗಳಲ್ಲಿ ನಟಿಸಿರುವುದಕ್ಕೆ ಅವರು ಕ್ಷಮೆ ಕೇಳಿದ್ದಾರೆ. 
"...ನಾನು ನಿಮ್ಮ ಆತ್ಮಗೌರವಕ್ಕೆ ಕುಂದು ತರುವಂತಹ ಕೆಲವು ಸಂಭಾಷಣೆಯನ್ನು ಹೇಳಿದ್ದೇನೆ. ಇನ್ನೆಂದಿಗೂ ನನ್ನ ಸಿನೆಮಾಗಳಲ್ಲಿ ಮಹಿಳೆಯರನ್ನು ಅಗೌರವಿಸಲು ಬಿಡುವುದಿಲ್ಲ..." ಎಂದು ಕೂಡ ಅವರು ಬರೆದಿದ್ದಾರೆ. 
ಫ್ರಬ್ರವರಿ ೧೭ ರಂದು ನಡೆದ ಈ ಅಪಹರಣದ ಪ್ರಕರಣದಲ್ಲಿ ಆರು ಜನರನ್ನು ಕೇರಳ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com