ಸಾಮಾಜಿಕ ಸಂದೇಶವನ್ನು ಹರಡುವುದು ನಕಲು ಮಾಡಿದಂತಲ್ಲ ಎನ್ನುವ ಯೋಗಿ "ನಾನು ಸರಿಯಾಗಿ ನೆನಪಿಸಿಕೊಂಡರೆ ಸಿನೆಮಾದ ಮೂಲಕ ಮೊದಲು ಹೇಳಿದ ಕಥೆಗಳು ರಾಮಾಯಣ ಮತ್ತು ಮಹಾಭಾರತ. .. ಇವುಗಳನ್ನು ಸಂಸ್ಕೃತದಲ್ಲಿ ಬರೆದು ಹಲವು ಭಾಷೆಗಳಲ್ಲಿ ಅನುವಾದ ಆಗಿದೆ. ಆದುದರಿಂದ ರಿಮೇಕ್ ಅನ್ನು ಕೂಡ ನಿಷಿದ್ಧದಂತೆ ಕಾಣುವ ಅವಶ್ಯಕತೆ ಇಲ್ಲ. ಯಾವುದೇ ಒಳ್ಳೆಯ ಕಥೆಯನ್ನು ಮತ್ತೆ ಮತ್ತೆ ಹೇಳಬೇಕಾಗುತ್ತದೆ ಮತ್ತು ವಿಭಿನ್ನ ಭಾಷೆಗಳಲ್ಲಿ, ವಿಭಿನ್ನ ಪ್ರೇಕ್ಷಕರಿಗೆ ಅದನ್ನು ಮೂಡಿಸಬೇಕಾಗುತ್ತದೆ. ಅಲ್ಲದೆ ನಾನು ಸಿನೆಮಾಗಳನ್ನು ಅಳವಡಿಸಿಕೊಳ್ಳುತ್ತೇನೆ, ರಿಮೇಕ್ ಮಾಡುವುದಿಲ್ಲ" ಎನ್ನುತ್ತಾರೆ ಯೋಗಿ.