ನಿರ್ದೇಶಕ ಗುರುಪ್ರಸಾದ್ ಜೊತೆ ಮನಸ್ತಾಪ; 'ಎರಡನೇ ಸಲ' ಚಿತ್ರ ಪ್ರದರ್ಶನಕ್ಕೆ ನಿರ್ಮಾಪಕ ಯೋಗೇಶ್ ತಡೆ

ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಎರಡನೇ ಸಲ ಚಿತ್ರ ಇದೀಗ ನಿರ್ದೇಶಕ ಮತ್ತು ನಿರ್ಮಾಪಕರ ನಡುವಿನ ಗುದ್ದಾಟದಿಂದಾಗಿ ಸ್ಥಗಿತಗೊಂಡಿದೆ...
ಎರಡನೇ ಸಲ
ಎರಡನೇ ಸಲ
ಬೆಂಗಳೂರು: ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಎರಡನೇ ಸಲ ಚಿತ್ರ ಇದೀಗ ನಿರ್ದೇಶಕ ಮತ್ತು ನಿರ್ಮಾಪಕರ ನಡುವಿನ ಗುದ್ದಾಟದಿಂದಾಗಿ ಸ್ಥಗಿತಗೊಂಡಿದೆ. 
ಮಾರ್ಚ್ 3 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ಚಿತ್ರಕ್ಕೆ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದು ಯಶಸ್ವಿಯಾಗಿ ಚಿತ್ರ ಪ್ರದರ್ಶನಗೊಳ್ಳುತ್ತಿತ್ತು. ಆದರೆ ಇದೀಗ ನಿರ್ದೇಶಕ ಗುರುಪ್ರಸಾದ್ ಮತ್ತು ನಿರ್ಮಾಪಕ ಯೋಗೇಶ್ ನಾರಾಯಣ್ ಅವರ ನಡುವಿನ ಗೊಂದಲದಿಂದಾಗಿ ಚಿತ್ರವನ್ನು ಹಿಂಪಡೆಯುತ್ತಿರುವುದಾಗಿ ಯೋಗೇಶ್ ಹೇಳಿದ್ದಾರೆ. 
ಈ ಬಗ್ಗೆ ಪ್ರತಿಕ್ರಿಯಿಸಿರುವ ಯೋಗೇಶ್ ನಾರಾಯಣ್ ಸದ್ಯ ಪ್ರದರ್ಶನಗೊಳ್ಳುತ್ತಿರುವ ಚಿತ್ರವನ್ನು ದುಖಃದಿಂದ ಹಿಂಪಡೆಯುತ್ತಿದ್ದೇನೆ. ನಿರ್ದೇಶಕ ಗುರುಪ್ರಸಾದ್ ರಿಂದ ಸಿನಿಮಾ ಅರ್ಧ ಸತ್ತಿದೆ. ಚಿತ್ರದ ಪ್ರಚಾರಕ್ಕೆ ಗುರುಪ್ರಸಾದ್ ಬಂದಿಲ್ಲ ಎಂದು ಹೇಳಿದ್ದಾರೆ. 
ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿರುವ ಎರಡನೇ ಚಿತ್ರದ ಎಲ್ಲಾ ಶೋಗಳನ್ನು ಸ್ಥಗಿತಗೊಳಿಸಲಾಗಿದ್ದು ಈ ಸಂಬಂಧ ನಾಳೆ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಲಿದೆ ಎಂದು ಯೋಗೇಶ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com