ಸುದೀಪ್ ನಂತರ ಟಾಲಿವುಡ್ ಮೂಲದ ಪ್ರಶಸ್ತಿ ಪಡೆದ ಕನ್ನಡಿಗ ಹೇಮಂತರಾವ್

ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ಈಗ ಚಿತ್ರದ ಅಭಿನಯಕ್ಕಾಗಿ ತೆಲುಗಿನ ಪ್ರತಿಷ್ಠಿತ ನಂದಿ ಪ್ರಶಸ್ತಿ ಪಡೆದಿದ್ದು ಇದೀಗ ಮತ್ತೊರ್ವ ಕನ್ನಡಿಗ ನಿರ್ದೇಶಕ ಹೇಮಂತರಾವ್ ಅವರು...
ಹೇಮಂತ್ ರಾವ್
ಹೇಮಂತ್ ರಾವ್
Updated on
ಸ್ಯಾಂಡಲ್ವುಡ್ ನ ಕಿಚ್ಚ ಸುದೀಪ್ ಈಗ ಚಿತ್ರದ ಅಭಿನಯಕ್ಕಾಗಿ ತೆಲುಗಿನ ಪ್ರತಿಷ್ಠಿತ ನಂದಿ ಪ್ರಶಸ್ತಿ ಪಡೆದಿದ್ದು ಇದೀಗ ಮತ್ತೊರ್ವ ಕನ್ನಡಿಗ ನಿರ್ದೇಶಕ ಹೇಮಂತರಾವ್ ಅವರು ಗೊಲ್ಲಪುಡಿ ಶ್ರೀನಿವಾಸ್ ಇಂಟರ್ ನ್ಯಾಷನಲ್ ಪ್ರಶಸ್ತಿಯನ್ನು ಪಡೆದಿದ್ದಾರೆ. 
ಗೊಲ್ಲಪುಡಿ ಶ್ರೀನಿವಾಸ್ ಮೆಮೊರಿಯಲ್ ಫೌಂಡೇಷನ್ 1997ರಿಂದ ಪ್ರತಿವರ್ಷ ಯುವ ನಿರ್ದೇಶಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡುತ್ತಿದ್ದು 2016ನೇ ಸಾಲಿನಲ್ಲಿ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಿರ್ದೇಶನಕ್ಕಾಗಿ ಹೇಮಂತರಾವ್ ಅವರಿಗೆ ಈ ಪ್ರಶಸ್ತಿ ನೀಡಲಿದ್ದಾರೆ.
ಯುವ ನಿರ್ದೇಶಕ ದಿವಂಗತ ಗೊಲ್ಲಪುಡಿ ಶ್ರೀನಿವಾಸ್ ನೆನಪಿನಾರ್ಥ ಹಿರಿಯ ನಟ ಗೊಲ್ಲಪುಡಿ ಮಾರುತಿರಾವ್ ಅವರು ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದ್ದಾರೆ. ಈ ಪ್ರಶಸ್ತಿ 1.5 ಲಕ್ಷ ನಗದು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com