ಗಾಯಕ ಎಸ್ ಪಿ ಬಿಗೆ ಲೀಗಲ್ ನೋಟಿಸ್ ನೀಡಿದ ಸಂಗೀತ ನಿರ್ದೇಶಕ ಇಳಯರಾಜ

: ಹಿನ್ನೆಲೆ ಗಾಯಕ ಎಸ್ .ಪಿ ಬಾಲಸುಬ್ರಮಣ್ಯಂ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅವರ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್...
ಎಸ್ ಪಿ ಬಾಲ ಸುಬ್ರಮಣ್ಯಂ ಮತ್ತು ಇಳಯರಾಜ
ಎಸ್ ಪಿ ಬಾಲ ಸುಬ್ರಮಣ್ಯಂ ಮತ್ತು ಇಳಯರಾಜ

ಚೆನ್ನೈ: ಹಿನ್ನೆಲೆ ಗಾಯಕ ಎಸ್ .ಪಿ ಬಾಲಸುಬ್ರಮಣ್ಯಂ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅವರ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ನೀಡಿದ್ದಾರೆ.

ವಿವಿಧೆಡೆ ನಡೆಯುವ ಸಂಗೀತ ಕಾರ್ಯಕ್ರಮಗಳಲ್ಲಿ ತಾವು ಸಂಗೀತ ಸಂಯೋಜಿಸಿರುವ ಹಾಡುಗಳನ್ನು ಹಾಡದಂತೆ ಸಂಗೀತ ನಿರ್ದೇಶಕ ಇಳಯರಾಜ ಎಸ್ .ಪಿ ಬಾಲಸುಬ್ರಮಣ್ಯಂ, ಶ್ರೀಮತಿ ಚೈತ್ರ ಮತ್ತು ಚರಣ್ ಅವರಿಗೆ ಲೀಗಲ್ ನೋಟಿಸ್ ನೀಡಿರುವುದಾಗಿ ಪೋಸ್ಟ್ ಹಾಕಿದ್ದಾರೆ.

ತಾವು ಸಂಗೀತ ಸಂಯೋಜಿಸಿರುವ ಗೀತೆಗಳನ್ನು ತಮ್ಮ ಅನುಮತಿಯಿಲ್ಲದೇ ಯಾವುದೇ ವೇದಿಕೆಗಳಲ್ಲಿ ಹಾಡುವಂತಿಲ್ಲ, ಒಂದು ವೇಳೆ ಹಾಡಿದರೇ, ಅದಕ್ಕೆ ದಂಡ ತೆರಬೇಕಾಗುತ್ತದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.

ನನ್ನ ಮಗ ಚರಣ್ ಎಸ್ ಪಿಬಿ50 ಎಂಬ ಹೆಸರಿನಲ್ಲಿ ವರ್ಲ್ಡ್ ಟೂರ್ ಆಯೋಜಿಸಿದ್ದ, ರಷ್ಯಾ, ಲಂಕಾ, ಮಲೇಶಿಯಾ , ಸಿಂಗಾಪುರ್ ಮತ್ತು ದುಬೈ ಗಳಲ್ಲಿ ಈಗಾಗಲೇ ಸಂಗೀತ ಪ್ರದರ್ಶನ ನೀಡಿದ್ದೇವೆ. ಆಗಸ್ಟ್ ವಲ್ಲಿ ಟೊರಾಂಟೋದಲ್ಲಿ ಸಂಗೀತ ಕಾರ್ಯಕ್ರಮ ನೀಡಬೇಕಿತ್ತು. ಆದರೆ ಕಾರ್ಯಕ್ರಮವನ್ನು ರದ್ದುಗೊಳಿಸುವುದಿಲ್ಲ, ನಮ್ಮ ಸಂಗೀತ ಪಯಣ ಮುಂದುವರಿಯುತ್ತದೆ. ಬೇರೆ ಸಂಗೀತ ನಿರ್ದೇಶಕರ ಗೀತೆಗಳನ್ನು ಹಾಡುವುದಾಗಿ ಎಸ್ ಪಿಬಿ ಹೇಳಿದ್ದಾರೆ.

ತಮ್ಮ ಜೀವಮಾನದ ಅವಧಿಯಲ್ಲಿ ಇದುವರೆಗೂ ಎಸ್ ಪಿಬಿ  ಸುಮಾರು 40 ಸಾವಿರ ಗೀತೆಗಳನ್ನು ಹಾಡಿದ್ದಾರೆ. ಇವರಿಗೆ 2011 ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಮತ್ತು ರಾಷ್ಚ್ರ ಪ್ರಶಸ್ತಿ ಸಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com