ಬಾಹುಬಲಿ 2: ಕಟ್ಟಪ್ಪ ಸತ್ಯರಾಜ್ ವಿರುದ್ಧ ಕಟಿಕಾ ಸಮುದಾಯದವರಿಂದ ದೂರು ದಾಖಲು

ಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಸಿನಿಮಾ ವಿಶ್ವಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಈ ಸಿನಿಮಾದಲ್ಲಿ ಕಟ್ಟಪ್ಪನ ಡೈಲಾಗ್ ...
ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್
ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್
ಮುಂಬಯಿ: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಸಿನಿಮಾ ವಿಶ್ವಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಆದರೆ ಈ ಸಿನಿಮಾದಲ್ಲಿ ಕಟ್ಟಪ್ಪನ ಡೈಲಾಗ್ ಸಮುದಾಯವೊಂದರ ಆಕ್ರೋಶಕ್ಕೆ ಕಾರಣವಾಗಿದೆ.
ಅರೆಕಟಿಕ ಪೋರಾಟ ಸಮಿತಿ ಕಟ್ಟಪ್ಪ ಪಾತ್ರಧಾರಿ ತಮಿಳಿನ ಹಿರಿಯ ನಟ ಸತ್ಯರಾಜಿ ವಿರುದ್ಧ ಮುಂಬಯಿಯಿ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಸತ್ಯರಾಜ್ ಕಟಿಕಾ ಚೀಕತಿ ಎಂಬ ಸಂಭಾಷಣೆಯಲ್ಲಿ ಕಟಿಕಾ ಸಮುದಾಯದವರನ್ನು ಅವಮಾನಿಸಿದ್ದಾರೆ ಎಂದು ದೂರಲಾಗಿದೆ. ಕಟಿಕಾ ಒಂದು ಜಾತಿಯ ಹೆಸರಾಗಿದೆ. ಕಟಿಕಾ ಸಮುದಾಯದವರು ಮೇಕೆ, ಕುರಿ ಮತ್ತು ಕೋಳಿ ಗಳ ಮಾಂಸ ಮಾರಾಟ ಮಾಡುತ್ತಾರೆ. ಈ ಸಮುದಾಯದವರು ಸಮಾಜಕ್ಕೆ ಆರೋಗ್ಯಯುತ ಆಹಾರ ನೀಡುತ್ತದೆ ಎಂದು ಹೇಳಿದ್ದಾರೆ, 
ನಾವು ಕಠಿಣ ಹೃದಯಿಗಳಲ್ಲ, ಅಮಾನವೀಯರಲ್ಲ, ಆದರೆ ಸಿನಿಮಾಗಳಲ್ಲಿ ನಮ್ಮ ಸಮುದಾಯವನ್ನು ಈ ರೀತಿಯಾಗಿ ಚಿತ್ರೀಕರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಸೆನ್ಸಾರ್ ಬೋರ್ಡ್ ಆ ಸಂಭಾಷಣೆಯನ್ನು ಸಿನಿಮಾದಿಂದ ತೆಗೆದು ಹಾಕಬೇಕು ಎಂದು ಸಮುದಾಯ ಒತ್ತಾಯಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com