ಚಂಬಲ್ ಚಿತ್ರದ ಬಿಡುಗಡೆಗಾಗಿ ಕಾಯುತ್ತಿರುವ ಸತೀಶ್ ಗೋಧಿ ಸಿನಿಮಾದಲ್ಲಿ ಒಂದು ಹಾಡಿನ ಶೂಟಿಂಗ್ ಬಾಕಿ ಉಳಿಸಿದ್ದಾರೆ. ಈ ಮಧ್ಯೆ ಸತೀಶ್ ಅವರು ರಾಮ ಕಾಡಿಗೆ ಹೋದ ಎಂಬ ಕಾಮಿಡಿ ಥ್ರಿಲ್ಲರ್ ಸಿನಿಮಾದ ಶೂಟಿಂಗ್ ಆರಂಭಿಸಲಿದ್ದಾರೆ. ಈ ಚಿತ್ರದಲ್ಲಿ ಹಲವು ಆಸಕ್ತಿಕರ ವಿಷಯಗಳಿರುತ್ತವೆ. ರಾಕೆಟ್ ನಂತರ ಸತೀಶ್ ಹೋಂ ಬ್ಯಾನರ್ ನಲ್ಲಿ ಇದು ಎರಡನೇ ಚಿತ್ರ. ಇಲ್ಲಿ ಇಬ್ಬರು ಯುವ ನಿರ್ದೇಶಕರಿದ್ದಾರೆ. ವಿಕ್ಕಿ ಮತ್ತು ವಿನಯ್ ಎಂಬ ಯುವ ನಿರ್ದೇಶಕರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.