ಕನ್ನಡ ಚಿತ್ರರಂಗ ನನ್ನ ಕುಟುಂಬದವರಿಗೆ ಎಂದಿಗೂ ವಿಶೇಷ: ಯುವನ್ ಶಂಕರ್ ರಾಜ

ಕನ್ನಡ ಸಿನಿಮಾ ರಂಗ ನನ್ನ ಕುಟುಂಬದ ಪಾಲಿಗೆ ಎಂದೆಂದಿಗೂ ವಿಶೇಷವೇ ಎಂದು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪುತ್ರ ಯುವನ್ ಶಂಕರ್ ರಾಜ ...
ಇಳಯ ರಾಜಾ ಮತ್ತು  ಯುವನ್ ಶಂಕರ್ ಇಳಯರಾಜಾ
ಇಳಯ ರಾಜಾ ಮತ್ತು ಯುವನ್ ಶಂಕರ್ ಇಳಯರಾಜಾ
ಬೆಂಗಳೂರು: ಕನ್ನಡ ಸಿನಿಮಾ ರಂಗ ನನ್ನ ಕುಟುಂಬದ ಪಾಲಿಗೆ ಎಂದೆಂದಿಗೂ ವಿಶೇಷವೇ ಎಂದು ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಪುತ್ರ ಯುವನ್ ಶಂಕರ್ ರಾಜಾ ಹೇಳಿದ್ದಾರೆ.
ಪ್ರಕಾಶ್ ರೈ, ರಚನಾ ಚಂದ್ರ, ವೇದಿಕಾ ಮತ್ತು ಅನಂತ್ ನಾಗ್ ಅಭಿನಯಿಸುತ್ತಿರುವ ಗೌಡ್ರು ಹೋಟೆಲ್ ಸಿನಿಮಾ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಯುವನ್, ನನಗೆ ಇದೊಂದು ಭಾವನಾತ್ಮಕ ಸಮಯವಾಗಿದೆ ಎಂದರು. 
ಏಕೆಂದರೆ ನನ್ನ ತಂದೆ ಇಳಯರಾಜ  ಕನ್ನಡ ಸಿನಿಮಾರಂಗದಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು, ಜಿ.ಕೆ ವೆಂಕಟೇಶ್ ಅವರಿಗೆ ಗಿಟಾರಿಸ್ಟ್ ಆಗುವ ಮೂಲಕ ಇಳಯರಾಜ ಪಾದರ್ಪಣೆ ಮಾಡಿದರು. 
ನಾನು ಕೂಡ ಕನ್ನಡದಿಂದಲೇ ವೃತ್ತಿ ಜೀವನ ಆರಂಭಿಸುತ್ತಿದ್ದೇನೆ, ನನಗೆ ಈ ಅವಕಾಶ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com