ಡ್ರಾಮಾ ಜ್ಯೂನಿಯರ್ಸ್: ಕಾರ್ಯಕ್ರಮದಿಂದ ಹೊರಬಂದ ನಿರ್ದೇಶಕ ಟಿ.ಎನ್ ಸೀತಾರಾಂ

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಡ್ರಾಮಾ ಜೂನಿಯರ್ಸ್ ತೀರ್ಪುಗಾರರ ತಂಡದಿಂದ ನಿರ್ದೇಶಕ ಟಿ.ಎನ್ ಸೀತಾರಾಂ ಹೊರ ಬಂದಿದ್ದಾರೆ. ...
ಟಿ.ಎನ್ ಸೀತಾರಾಂ
ಟಿ.ಎನ್ ಸೀತಾರಾಂ
ಬೆಂಗಳೂರು: ಜೀ ಕನ್ನಡ ವಾಹಿನಿಯ  ಜನಪ್ರಿಯ ಕಾರ್ಯಕ್ರಮ ಡ್ರಾಮಾ ಜೂನಿಯರ್ಸ್ ತೀರ್ಪುಗಾರರ ತಂಡದಿಂದ ನಿರ್ದೇಶಕ ಟಿ.ಎನ್ ಸೀತಾರಾಂ ಹೊರ ಬಂದಿದ್ದಾರೆ. 
ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ನಿರ್ದೇಶಕ ಸೀತಾರಾಮ್, ಹಿರಿಯ ನಟಿ ಲಕ್ಷ್ಮಿ ಮತ್ತು ನಟ ವಿಜಯ್ ರಾಘವೇಂದ್ರ ತೀರ್ಪುಗಾರರಾಗಿದ್ದರು. ಮೊದಲ ಸೀಸನ್ ಬಳಿಕ ಎರಡನೇ ಸೀಸನ್ ಗೂ ಸಹ ಈ ಮೂವರು ತೀರ್ಪುಗಾರರನ್ನೇ ವಾಹಿನಿ ಮುಂದುವರೆಸಿತ್ತು. 
ಆದರೆ ಇನ್ನು ಮುಂದೆ ತೀರ್ಪುಗಾರರ ಸ್ಥಾನದಲ್ಲಿ ನಿರ್ದೇಶಕ ಸೀತಾರಾಮ್ ಇರುವುದಿಲ್ಲ. 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಿಂದ ಹೊರಬಂದ ನಿರ್ದೇಶಕ ಸೀತಾರಾಮ್ ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಈ ಕಾರ್ಯಕ್ರಮದ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಮುಂದೆ ವಿಜಯ್ ರಾಘವೇಂದ್ರ ಮತ್ತು ಲಕ್ಷ್ಮಿ ಅವರ ಜೊತೆಗೆ ತೀರ್ಪುಗಾರರಾಗಿ ನಟ ಮುಖ್ಯಮಂತ್ರಿ ಚಂದ್ರು ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com